ಕಾರವಾರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ: 80 ಕ್ಕೂ ಹೆಚ್ಚು ದಂಪತಿ ಪೂಜಾ ಕಾರ್ಯದಲ್ಲಿ ಭಾಗಿ

ಕಾರವಾರ: ನಗರದ ಬಾಡದ ಶ್ರೀ ಮಹಾದೇವ ವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ ಶ್ರೀ ಮಹಾದೇವ ನಾಟ್ಯ ಮಂಡಳಿ ಬಾಡ ಇವರಿಂದ ನಗರದ ಶ್ರೀ ಮಹಾದೇವ ರಂಗಮಂದಿರದಲ್ಲಿ ಸೋಮವಾರ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಲಾಗಿತ್ತು.

ಕಳೆದ 24 ವರ್ಷಗಳಿಂದ ಶ್ರೀ ಮಹಾದೇವ ನಾಟ್ಯ ಮಂಡಳಿ ಈ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸುತ್ತಾ ಬಂದಿದೆ. ಈ ವರ್ಷ 80 ಕ್ಕೂ ಹೆಚ್ಚು ದಂಪತಿಗಳು ಈ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಪೂಜೆಯ ನಂತರ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು.