ಬೆಂಬಿಡದೇ ಸುರಿಯುತ್ತಿರೋ ಮಳೆಗೆ ಕಂಗಾಲಾದ ಜನ.! ಜನರಿಲ್ಲದೇ ಬಿಕೋ ಎನ್ನುತ್ತಿದ್ದ ವಾರದ ಸಂತೆ.!

ಮುಂಡಗೋಡ: ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಸೋಮವಾರವೂ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಸುರಿಯುತ್ತಿದ್ದ ಮಳೆ ಬಿಡುವು ನೀಡದೆ ತಾಲೂಕಿನ ವಿವಿಧ ಕಡೆಗಳಲ್ಲಿ ಮನೆಗಳು ಶಾಲೆಗಳ ಕೊಠಡಿಗಳು ಹಾನಿಯಾಗಿವೆ. ಕೆರೆ ಕಟ್ಟೆಗಳು ಒಡೆದು ನೀರು ರೈತರ ಗದ್ದೆಗಳಲ್ಲಿ ನುಗ್ಗಿ ಹಾನಿಯಾಗುತ್ತಿವೆ.

ಸೋಮವಾರ ವಾರದ ಸಂತೆಯಾಗಿದ್ದರಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಸಂತೆ ಮಾರುಕಟ್ಟೆಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಸಂತೆಗೆ ಬರುವವರ ಸಂಖ್ಯೆ ಕಡಿಮೆ ಆಗಿರುವುದು ಕಂಡು ಬಂತು.ಬೆಂಬಿಡದೆ ಸುರಿಯುತ್ತಿದ್ದ ಮಳೆಗೆ ಹೆದರಿದ ವ್ಯಾಪಾರಸ್ಥರು ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಆಗಮಿಸಿದ್ದರು. ಗ್ರಾಹಕರು ಇಲ್ಲದೆ ಇರುವುದರಿಂದ ವ್ಯಾಪಾರವಿಲ್ಲದೆ ಮನೆಗೆ ತೆರಳಬೇಕಾಯಿತು. ಗ್ರಾಹಕರು ಮಳೆಯಿಂದ ಮನೆಯಿಂದ ಹೊರ ಬರದೆ ಇಂದು ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿದ್ದರು. ಬಂದ ಗ್ರಾಹಕರು ತರಕಾರಿ ಖರೀದಿಸಲು ಹೋಗುವಾಗ ಮಳೆಯಿಂದ ಓಡಾಡದೆ ಸುಮ್ಮನೆ ಕೈಕಟ್ಟಿ ನಿಂತಿರುವುದು ಕಂಡು ಬಂತು.