ಜೇನುತುಪ್ಪವೆಂದು ತಿಳಿದು ಕಳೆನಾಶಕ ಸೇವಿಸಿದ ಬಾಲಕ.!

ಮುಂಡಗೋಡ: ಜೇನುತುಪ್ಪದ ಬಾಟಲಿ ಎಂದು ತಿಳಿದು, ಬಾಲಕನೊಬ್ಬ ಕಳೆನಾಶಕ ಸೇವಿಸಿದ ಘಟನೆ ತಾಲೂಕಿನ ಚಿಟಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ವಿಠಲ ಬಾಬು ಕಾಳೆ (13) ಎಂಬ ಬಾಲಕ ಕಳೆನಾಶಕ ಸೇವಿಸಿ ತೀವ್ರ ಅಸ್ವಸ್ಥಗೊಂಡು ಹುಬ್ಬಳ್ಳಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

ಜೇನು ತುಪ್ಪದ ಬಾಟಲಿ ಪಕ್ಕವೇ ಕಳೆನಾಶಕ ಇಡಲಾಗಿತ್ತು. ಹೀಗಾಗಿ ಜೇನುತುಪ್ಪವೆಂದು ತಿಳಿದು ಪಕ್ಕದಲ್ಲಿ ಇದ್ದ ಕಳೆನಾಶಕ ಸೇವಿಸಿದ್ದಾನೆ. ಅಸ್ವಸ್ಥಗೊಂಡ ಬಾಲಕನಿಗೆ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ.