ಹಳಿಯಾಳ, ದಾಂಡೇಲಿಯಲಿ ಮತ್ತೊಮ್ಮೆ ಮೋದಿ ಸರ್ಕಾರ ಗೋಡೆ ಬರಹಕ್ಕೆ ಚಾಲನೆ ನೀಡಿದ ರೂಪಾಲಿ ಎಸ್‌. ನಾಯ್ಕ

ಹಳಿಯಾಳ/ದಾಂಡೇಲಿ : ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್.‌ ನಾಯ್ಕ ಅವರು, ಜಿಲ್ಲೆಯಾದ್ಯಂತ ಮತ್ತೊಮ್ಮೆ ಮೋದಿ  ಸರ್ಕಾರ ಗೋಡೆ ಬರಹ ಅಭಿಯಾನ ಚುರುಕುಗೊಳಿಸಿದ್ದಾರೆ. ಇದೀಗ ದಾಂಡೇಲಿ, ಹಳಿಯಾಳದಲ್ಲೂ ಕೂಡ ರೂಪಾಲಿ ನಾಯ್ಕ ಮತ್ತೊಮ್ಮೆ ಮೋದಿ ಸರ್ಕಾರ ಗೋಡೆ ಬರಹಕ್ಕೆ ಚಾಲನೆ ನೀಡಿದ್ದಾರೆ…

ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ದಾಂಡೇಲಿ ನಗರದಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಮನೆಗಳಿಗೆ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಘೋಷಣೆಯನ್ನು ಗೋಡೆ ಬರಹ ಅಭಿಯಾನಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಚಾಲನೆ ನೀಡಿದರು.‌  ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಮುಖಂಡ ರಾಜೇಂದ್ರ ನಾಯ್ಕ, ಬಿಜೆಪಿ ಮಂಡಲದ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ್, ಪ್ರಧಾನ ಕಾರ್ಯದರ್ಶಿ ಗುರು ಮಠಪತಿ, ಗಿರೀಶ್ ಟೋಸೂರ, ಪಕ್ಷದ ಮುಖಂಡರಾದ ರೋಷನ್ ನೇತ್ರಾವಳಿ, ಬಸವರಾಜ ಕಲಶೆಟ್ಟಿ ಹಾಗೂ ಪಕ್ಷದ ನಗರ ಸಭಾ ಸದಸ್ಯರು, ಪಕ್ಷದ ಮುಖಂಡರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ರು…

ಬಳಿಕ ಹಳಿಯಾಳ ಪಟ್ಟಣದ ವಾರ್ಡ್ ನಂ 10ರ ಕಸಬಾ ಗಲ್ಲಿಯ ಪಕ್ಷದ ಕಾರ್ಯಕರ್ತರ ಮನೆಗಳಿಗೆ ಭಾರತೀಯ ಜನತಾ ಪಕ್ಷದ ಕಮಲದ ಚಿಹ್ನೆ ಹಾಗೂ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಘೋಷಣೆಯನ್ನು ಗೋಡೆ ಮೇಲೆ ಬರೆದು ಅಭಿಯಾನಕ್ಕೆ ರೂಪಾಲಿ ನಾಯ್ಕ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೂಪಾಲಿ ನಾಯ್ಕ ಅವರು, ನರೇಂದ್ರ ಮೋದಿಯವರು, 3 ನೇ ಬಾರಿ ಪ್ರಧಾನಿಯಾಗುವ ಮೂಲಕ 2047 ರಲ್ಲಿ ವಿಕಸಿತ ಭಾರತದ ಕನಸು ನನಸಾಗಬೇಕು. ಈ ನಿಮಿತ್ತ ಪಕ್ಷದ ರಾಷ್ಟ್ರ ಹಾಗೂ ರಾಜ್ಯ ಘಟಕದ ಸೂಚನೆ ಮೇರೆಗೆ ಗೋಡೆ ಬರಹ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದ್ರು…

ಈ ಸಂದರ್ಭದಲ್ಲಿ ಅಭಿಯಾನದ ಜಿಲ್ಲಾ ಸಂಚಾಲಕರಾದ ರಾಜೇಂದ್ರ ನಾಯ್ಕ, ಮಂಡಲ ಸಂಚಾಲಕರಾದ ಸಂತೋಷ ಘಟಕಾಂಬಳೆ, ಸಹ ಸಂಚಾಲಕರಾದ ಯಲ್ಲಪ್ಪ ಹೆಳವರ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣಪತಿ ಕರಂಜೇಕರ, ಪುರಸಭೆ ಸದಸ್ಯರಾದ ಉದಯ ಹೂಲಿ, ಚಂದ್ರಕಾಂತ ಕಮ್ಮಾರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಮುತ್ನಾಳೆ, ವಿ.ಎಂ.ಪಾಟೀಲ್, ಆನಂದ ಕಂಚನಾಳಕರ, ಯಲ್ಲಪ್ಪ ಹೊನ್ನೋಜಿ, ನಾರಾಯಣ ಅಂತ್ರೋಳಕರ, ಹನುಮಂತ ಚಲವಾದಿ, ಮೊದಲಾದವರು ಉಪಸ್ಥಿತರಿದ್ದರು.