ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್‌. ನಾಯ್ಕ ಅವರಿಗೆ ಅಭಿನಂದನಾ ಕಾರ್ಯಕ್ರಮ  

ಕಾರವಾರ : ರಾಜ್ಯ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಶ್ರೀಮತಿ ರೂಪಾಲಿ ಎಸ್‌. ನಾಯ್ಕ ಅವರಿಗೆ ಕಾರವಾರದಲ್ಲಿ ಪಕ್ಷದ ವತಿಯಿಂದ ಅಭಿನಂದಿಸಲಾಯ್ತು..

ಭಾರತೀಯ ಜನತಾ ಪಕ್ಷ ಗ್ರಾಮೀಣ ಹಾಗೂ ಭಾರತೀಯ ಜನತಾ ಪಕ್ಷ ನಗರದ ವತಿಯಿಂದ ಪಕ್ಷದ ಕಚೇರಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.. ಭಾರತೀಯ ಜನತಾ ಪಕ್ಷದ ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ ಮಾತನಾಡಿ, ರೂಪಾಲಿ ನಾಯ್ಕ್ ಅವರು ಪಕ್ಷ ಸಂಘಟನೆಗೆ ಪಟ್ಟ ಶ್ರಮ, ಶಾಸಕರಾಗಿದ್ದ ಅವಧಿಯಲ್ಲಿ ಅಭಿವೃದ್ಧಿ ಹಾಗೂ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದ ಬಗ್ಗೆ ಮಾತನಾಡಿದ್ರು. ನಂತರ ಉಪಾಧ್ಯಕ್ಷರಿಗೆ ನಗರ, ಗ್ರಾಮೀಣ, ಪಂಚಾಯತ್, ಆಟೋ ಚಾಲಕರ ಸಂಘ ಹಾಗೂ ಕಾರ್ಯಕರ್ತರಿಂದ ಗೌರವ ಸಮರ್ಪಿಸಿ ಅಭಿನಂದಿಸಲಾಯ್ತು…

ಗೌರವ ಸ್ವೀಕರಿಸಿ ಮಾತನಾಡಿದ ರೂಪಾಲಿ ಎಸ್.‌ ನಾಯ್ಕ ಅವರು, ಸಂಘಟನೆ ಎನ್ನುವುದು ಸುಲಭವಲ್ಲ. ಕಷ್ಟ ಪಟ್ಟು ದುಡಿದಾಗ ಮಾತ್ರ ಸಂಘಟನೆ ಸಾಧ್ಯ. ನಮ್ಮಲ್ಲಿ ಧೈರ್ಯ, ಆತ್ಮ ವಿಶ್ವಾಸವಿದ್ರೆ ಮಾತ್ರ ಅಭಿವೃದ್ಧಿ ಸಾಧ್ಯ. ಸನ್ಮಾನ್ಯ ಮೋದಿಜಿಯವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಾವು ನಮ್ಮ ಅಳಿಲು ಸೇವೆ ಮಾಡಿದರೆ, ಅದೇ ದೇಶಕ್ಕಾಗಿ ಮಾಡಿದ ತ್ಯಾಗ ಎಂದರು. ಅಭಿನಂದನಾ ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಹರಿದು ಬಂದಿದ್ದ ಕಾರ್ಯಕರ್ತರನ್ನು ನೋಡಿ ಭಾವುಕರಾದ ರೂಪಾಲಿಯವರು, ಪಕ್ಷ  ತನಗೆ ನೀಡಿದ ರಾಜ್ಯ ಉಪಾಧ್ಯಕ್ಷೆ ಸ್ಥಾನಕ್ಕೆ ಗೌರವ ನೀಡಿ ದುಡಿಯುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನನಗೆ ಸ್ಥಾನ ನೀಡಲು ಸಹಕರಿಸಿದ ಎಲ್ಲಾ ಮುಖಂಡರಿಗೂ ಕಾರ್ಯಕರ್ತರಿಗೂ ಋಣಿ ಎಂದು, ನನ್ನ ಜೀವದ ಉಸಿರು ಇರುವ ತನಕ  ಬಿಜೆಪಿ ಪಕ್ಷದಲ್ಲಿ ದುಡಿಯುತ್ತೇನೆ ಎಂದರು. ಅನೇಕ ಕಾರ್ಯಕರ್ತರು ರೂಪಾಲಿ ನಾಯ್ಕ್ ಅವರ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ರು…

ಅಭಿನಂದನಾ ಸಮಾರಂಭದಲ್ಲಿ ನಗರ ಅಧ್ಯಕ್ಷ ನಾಗೇಶ್ ಕುರ್ಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ್ ಬಾಂದೆಕರ್, ನಯನ ನಿಲಾವರ್ ಉಪಸ್ಥಿತರಿದ್ದರು. ಹಾಗೇ ಪಕ್ಷದ ಅನನ್ಯ ಜವಾಬ್ದಾರಿ ಹೊತ್ತ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು…