ನಾಳೆ ದಾಂಡೇಲಿಯಲ್ಲಿ ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧೆ

ದಾಂಡೇಲಿ : ನಗರದ ದಾಂಡೇಲಿ ಫಿಟ್ನೆಸ್ ಲ್ಯಾಬಿನ ಆಶ್ರಯದಡಿ ಹಳೆ ನಗರಸಭೆ ಮೈದಾನದಲ್ಲಿ ನಾಳೆ ಸಂಜೆ 6 ಗಂಟೆಗೆ ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧೆ ನಡೆಯಲಿದೆ ಎಂದು ದಾಂಡೇಲಿ ಫಿಟ್ನೆಸ್ ಲ್ಯಾಬ್ ನ ಮುಖ್ಯಸ್ಥರು ಹಾಗೂ ಪಂದ್ಯಾವಳಿಯ ಸಂಘಟಕರಾದ ರಹೀಮ್ ಖಾನ್ ಮತ್ತು ಯೂಸೂಪ್ ಶೇಖ ಅವರು ತಿಳಿಸಿದ್ದಾರೆ.

ಅವರು ಶುಕ್ರವಾರ ನಗರದಲ್ಲಿ ಪಂದ್ಯಾವಳಿಯ ಕುರಿತಂತೆ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದರು. ರಾಜ್ಯದ ವಿವಿದೆಡೆಗಳಿಂದ 150 ಕ್ಕೂ ಹೆಚ್ಚು ದೇಹದಾಢ್ಯ ಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ನಿರ್ಣಾಯಕರು ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಭಾಗವಹಿಸಲಿದ್ದು, ಈ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಬಹುಮಾನವನ್ನು ನೀಡಲಾಗುವುದು. ಆಕರ್ಷಕವಾಗಿ ನಡೆಯಲಿರುವ ಈ ಪಂದ್ಯಾವಳಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಮನವಿಯನ್ನು ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಯು. ಎಸ್.ಪಾಟೀಲ್, ಪ್ರಮುಖರಾದ ರಿಯಾಜ್ ಅಹಮದ್ ಸೈಯದ್, ಮೆಹಬೂಬ್ ಪೊಲೀಸ್, ಅನ್ವರ್ ಪಠಾಣ್, ಮುನ್ನ ಸಾಂಕ್ಲಾ, ಸದ್ದಾಂ ಎಲಿಗಾರ್, ಬಿಲ್ಲಾಲ್ ಜಮಾದಾರ, ಆರೀಪ್ ಖಾಜಿ, ಸತ್ತಾರ್ ಕಿತ್ತೂರು, ಸುಬಾನಿ ನದಾಫ್, ಇರ್ಷಾದ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.