ಶಿರಸಿಯಲ್ಲಿ ಜಿ.ಎಸ್.ಅಜ್ಜೀಬಳ‌ ಪುರಸ್ಕಾರವನ್ನು ಸ್ವೀಕರಿಸಿದ ಪತ್ರಕರ್ತ ಸಂದೇಶ್ ದೇಸಾಯಿ

ಜೋಯಿಡಾ : ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ‌ದ ಪ್ರತಿಷ್ಟಿತ ಜಿ.ಎಸ್.ಅಜ್ಜೀಬಳ ಪ್ರಶಸ್ತಿಗೆ ಆಯ್ಕೆಯಾಗಿದ್ದ ಜೋಯಿಡಾ ತಾಲೂಕಿನ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಸಂದೇಶ್ ದೇಸಾಯಿಯವರು ಅವರು ಭಾನುವಾರ ಶಿರಸಿಯಲ್ಲಿ ಆಯೋಜಿಸಲಾಗಿದ್ದ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ‌ ಮಂಡಳಿಯ ಸುವರ್ಣ‌ ಮಹೋತ್ಸವದ ಭವ್ಯ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಶಾಸಕರುಗಳಾದ ಭೀಮಣ್ಣ ನಾಯ್ಕ ಮತ್ತು ಶಿವರಾಮ ಹೆಬ್ಬಾರ್, ಹೋರಾಟಗಾರ ಅನಂತಮೂರ್ತಿ ಹೆಗಡೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುಬ್ರಾಯ ಬಕ್ಕಳ, ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ವಿಠ್ಠಲದಾಸ್ ಕಾಮತ್, ರಾಧಾಕೃಷ್ಣ ಭಟ್, ಪ್ರದೀಪ್ ಶೆಟ್ಟಿ, ಬಸವರಾಜ ಪಾಟೀಲ್, ಅನಂತ ದೇಸಾಯಿ, ನಾಗರಾಜ ಭಟ್, ಭವಾನಿಶಂಕರ್, ರಾಜೇಂದ್ರ ಹೆಗಡೆ, ಸುಮಂಗಲಾ ಹೊನ್ನೆಕೊಪ್ಪ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.