ಅಂಬೇವಾಡಿ, ಬರ್ಚಿ ರಸ್ತೆಯಲ್ಲಿ ಒಂಟಿ ಸಲಗನ ಹಾವಳಿ : ಕೃಷಿ ಚಟುವಟಿಕೆಗಳಿಗೆ ಹಾನಿ

ದಾಂಡೇಲಿ : ತಾಲೂಕಿನ ಅಂಬೇವಾಡಿ, ಬರ್ಚಿ ರಸ್ತೆಯಲ್ಲಿ ಕಳೆದ ಕೆಲವು ದಿನಗಳಿಂದ ಒಂಟಿ ಸಲಗವೊಂದರ ಹಾವಳಿ ತೀವ್ರವಾಗಿದ್ದು, ಸ್ಥಳೀಯ ರೈತಾಪಿ ಜನರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ.

ಅಂಬೇವಾಡಿ, ಬರ್ಚಿ ರಸ್ತೆಯಲ್ಲಿ ಹಾಗೂ ಹತ್ತಿರದ ಮೌಳಂಗಿ, ವಿಟ್ನಾಳ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಒಂಟಿ ಸಲಗವೊಂದು ಕೃಷಿ ಜಮೀನಿಗೆ ದಾಳಿ ಮಾಡಿ ಕೃಷಿ ಬೆಳೆಗಳನ್ನು ನಾಶ ಮಾಡುತ್ತಿದೆ. ಸ್ಥಳೀಯ ರೈತರು ಬೆಳೆದ ಕಬ್ಬು, ಜೋಳ ಒಂಟಿ ಸಲಗನ ದಾಳಿಗೆ ನೆಲಕಚ್ಚಿವೆ. ಸೋಮವಾರವು ಬೆಳಿಗ್ಗೆ ಆನೆ ಮತ್ತೆ ಸ್ಥಳೀಯರ ಕೃಷಿ ಜಮೀನಿಗೆ ನುಗ್ಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಯನ್ನು ಓಡಿಸುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಂಡಿದ್ದಾರೆ