ಗಣರಾಜ್ಯೋತ್ಸವದ ನಿಮಿತ್ತ ವಿದ್ಯುದ್ದೀಪಗಳಿಂದ ಅಲಂಕಾರಗೊಂಡ ಜೋಯಿಡಾ ಪೊಲೀಸ್ ಠಾಣೆ

ಜೋಯಿಡಾ : ಜ;26 ರ ಗಣರಾಜ್ಯೋತ್ಸವದ ನಿಮಿತ್ತವಾಗಿ ತಾಲೂಕು ಕೇಂದ್ರದಲ್ಲಿರುವ ಪೊಲೀಸ್ ಠಾಣೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಸಿಪಿಐ ನಿತ್ಯಾನಂದ ಪಂಡಿತ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಮಹೇಶ್ ಮಾಳಿ‌ ಮತ್ತು ಮಹಾದೇವಿ ನಾಯ್ಕೋಡಿ ಅವರುಗಳ ನೇತೃತ್ವದಡಿ ಪೊಲೀಸರ ಸಹಕಾರದಲ್ಲಿ ಇಡೀ ಪೊಲೀಸ್ ಠಾಣೆಯ ಕಟ್ಟಡವನ್ನು ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಶೃಂಗರಿಸಲಾಗಿದೆ. ಗಣರಾಜ್ಯೋತ್ಸವ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ‌ ಸಂಭ್ರಮ, ಸಡಗರದಿಂದ ಆಚರಿಸಲು ಮುಂದಾದ ಪೊಲೀಸ್ ಇಲಾಖೆಯ ಕಾರ್ಯದ ಬಗ್ಗೆ ಮೆಚ್ಚಿಗೆ ವ್ಯಕ್ತವಾಗಿದೆ.