ಸಿದ್ದಾಪುರದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇಂದಿನಿಂದ ಜಾತ್ರೋತ್ಸವ ಹಾಗೂ ವಿವಿಧ ಪೂಜಾ ಕಾರ್ಯಕ್ರಮ

ಸಿದ್ದಾಪುರ : ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇಂದಿನಿಂದ ಜಾತ್ರೋತ್ಸವವು ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಧ್ವಜಾರೋಹಣದೊಂದಿಗೆ ಅದ್ದೂರಿಯಾಗಿ ಆರಂಭಗೊಂಡಿತುಧ್ವಜಾರೋಹಣದ ವೇಳೆ ಗರುಡ ದೇವಾಲಯದ ಸುತ್ತಲೂ ಹಾಕಿದ ಪ್ರದಕ್ಷಿಣೆ ಭಕ್ತರ ಗಮನ ಸೆಳೆಯಿತು. ಪ್ರತಿ ವರ್ಷವೂ ಸಹ ಪೂಜೆ ವೇಳೆ ಗರುಡ ಪ್ರದಕ್ಷಿಣೆ ಹಾಕುವುದು ಕಂಡು ಬರುತ್ತಿದ್ದು ಈ ದಿನವೂ ಗರುಡ ಬಂದಿರುವುದಕ್ಕೆ ಭಕ್ತರು ಸಂತಸ ಗೊಂಡರು.
ದೇವಾಲಯಕ್ಕೆ ಮಾಡಿರುವ ವಿದ್ಯುತ್ ದೀಪಾಲಂಕಾರ ಮೆರಗು ಹೆಚ್ಚಿಸಿತು.
ಜಾತ್ರೋತ್ಸವದ ಆರಂಭದ ದಿನವಾದ ಇಂದು ಹಲವು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.