ಇಂದು ದಾಂಡೇಲಿಗೆ ಪುರಪ್ರವೇಶ ಮಾಡಲಿರುವ ಗೋಕರ್ಣ ಪರ್ತಗಾಳಿ ಮಠದ ಪೂಜ್ಯ ವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿ

ದಾಂಡೇಲಿ : ಶ್ರೀ.ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮ ಪೂಜ್ಯ ಗುರುವರ್ಯ ಶ್ರೀ. ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಜ: 11 ರಂದು ಇಂದು ದಾಂಡೇಲಿಗೆ ಪುರಪ್ರವೇಶ ಮಾಡಲಿದ್ದಾರೆ.

ಇಂದು ಸಂಜೆ 6:00ಗೆ ದಾಂಡೇಲಿ ನಗರದ ಸೋಮಾನಿ ವೃತ್ತದಲ್ಲಿ ಪೂಜ್ಯ ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಭವ್ಯ ಮೆರವಣಿಗೆಯೊಂದಿಗೆ ಕುಳಗಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗುತ್ತದೆ.

ಜನವರಿ 12 ರಿಂದ 15 ರವರೆಗೆ ಶ್ರೀ.ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಹಾಗೂ ದೇವಸ್ಥಾನದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.‌

ಈ ದಿನಗಳಂದು ಪ್ರತಿದಿನ ಬೆಳಿಗ್ಗೆ 07 ಗಂಟೆಗೆ ಶ್ರೀರಾಮದೇವ ವೀರ ವಿಠ್ಠಲ ದೇವರ ನೈರ್ಮಲ್ಯ ವಿಸರ್ಜನಾ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 12:30 ಗಂಟೆಗೆ ಶ್ರೀ.ಲಕ್ಷ್ಮಿ ವೆಂಕಟರಮಣ ದೇವರ ಮಹಾಪೂಜೆ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ.

ಜನವರಿ 12ರಂದು ಸಂಜೆ 5:30 ಗಂಟೆಗೆ ಧಾರವಾಡದ ಪ್ರಸಾದ್ ಪ್ರಭು ಹಾಗೂ ಸಂಗಡಿಗದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜನವರಿ 13ರಂದು ಶಿರಸಿಯ ಪಂಡಿತ್ ಶ್ರೀ.ನಾರಾಯಣ ದಾಸ ಇವರಿಂದ ಹರಿಕಥೆ ನಡೆಯಲಿದೆ. ಜನವರಿ 14ರಂದು ಧಾರವಾಡದ ಸುಜಯ್ ಶಾನಭಾಗ್ ಹಾಗೂ ಬಳಗದವರಿಂದ ಚಿಂತನ ರಾಮಾಯಣ ಕಾರ್ಯಕ್ರಮ ಜರಗಲಿದೆ.

ಜನವರಿ 15ರಂದು ವಿವಿಧ ಪೂಜಾ ಕಾರ್ಯಕ್ರಮಗಳು ನಡೆದ ಬಳಿಕ ಸಂಜೆ ಐದು ಗಂಟೆಗೆ ಪೂಜ್ಯರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮದ ಜೊತೆಯಲ್ಲಿ ಪೂಜ್ಯ ಶ್ರೀ. ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿಯವರಿಂದ ಪ್ರವಚನ ಕಾರ್ಯಕ್ರಮ ಜರಗಲಿದೆ.

ಐದು ದಿನಗಳ ಈ ಭವ್ಯ ಕಾರ್ಯಕ್ರಮಕ್ಕೆ ಈಗಾಗಲೇ ಶ್ರೀ. ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಶ್ರೀ.ವಿದ್ಯಾದಿರಾಜ ಸಭಾಭವನ ಹಾಗೂ ಆವರಣದಲ್ಲಿ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ.