ಹೊನ್ನಾವರದ ಅಡಕಾರ ಗ್ರಾಮದಲ್ಲಿ ಮನೆ ಮನೆಗೆ ಶ್ರೀರಾಮ‌ ಮಂದಿರದ ಮಂತ್ರಾಕ್ಷತೆ & ಆಮಂತ್ರಣ ಪತ್ರಿಕೆ ವಿತರಣಾ ಅಭಿಯಾನಕ್ಕೆ ಚಾಲನೆ


ಹೊನ್ನಾವರ :- ಜನವರಿ 22ರಂದು ಅಯೋಧ್ಯೆಯ ಶ್ರೀರಾಮಮಂದಿರದ ವಿದ್ಯುಕ್ತ ಲೋಕಾರ್ಪಣೆ ಹಿನ್ನಲೆಯಲ್ಲಿ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ಮತ್ತು ಆಮಂತ್ರಣ ಪತ್ರಿಕೆಗಳನ್ನು ಮನೆ ಮನೆಗೆ ವಿತರಣೆ ಮಾಡುವ ಅಭಿಯಾನಕ್ಕೆ ಹೊನ್ನಾವರ ತಾಲೂಕಿನ ಅಡಕಾರ ಗ್ರಾಮದಲ್ಲಿ ಚಾಲನೆ ನೀಡಲಾಯಿತು…


ರಾಮಕ್ಷತ್ರಿಯ ಯುವಕ ಸಂಘ (ರಿ) ಅಡಕಾರ ಅವರ ನೇತೃತ್ವದಲ್ಲಿ, ಮಲ್ಲಿಕಾರ್ಜುನ ದೇವಾಲಯದಿಂದ ಪ್ರಾರಂಭವಾಗಿ ಬಳಿಕ ಮನೆ‌‌ ಮನೆಗೆ ಪವಿತ್ರ ಮಂತ್ರಾಕ್ಷತೆ ಮತ್ತು ಆಮಂತ್ರಣ ಪತ್ರಿಕೆಯನ್ನು ವಿತರಿಸುವ ಸಮಯದಲ್ಲಿ ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು…
ಈ ವೇಳೆ ರಾಮಕ್ಷತ್ರಿಯ ಯುವಕ ಸಂಘದ ಅಧ್ಯಕ್ಷರು, ಸದಸ್ಯರು, ಹಿಂದೂ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.