ನುಡಿಸಿರಿ ವಾಹಿನಿ ಕಚೇರಿಗೆ ಭೇಟಿ ನೀಡಿದ ಆರ್.ವಿ ದೇಶಪಾಂಡೆ-ನುಡಿಸಿರಿ ನಿಷ್ಪಕ್ಷಪಾತ ವರದಿಯನ್ನು ಶ್ಲಾಘಿಸಿದ ಶಾಸಕರು

ಹೊನ್ನಾವರ : ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕರಾದ ಆರ್.ವಿ ದೇಶಪಾಂಡೆಯವರು ಭಾನುವಾರ ನುಡಿಸಿರಿ ವಾಹಿನಿ ಕಚೇರಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ರು. ಇದೇ ವೇಳೆ ಶಾಸಕರು ನುಡಿಸಿರಿ ವಾಹಿನಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು..

ನುಡಿಸಿರಿ ಕಚೇರಿಗೆ ಆಗಮಿಸಿದ ಶಾಸಕರನ್ನು ವಾಹಿನಿ ವತಿಯಿಂದ ಹೂಗುಚ್ಚ ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯ್ತು. ಶಾಸಕರು ನುಡಿಸಿರಿ ವಾಹಿನಿ ವಿಕ್ಷೀಸುತ್ತಿರುವಾಗ ಅವರದೆ ಸುದ್ದಿ ಪ್ರಸಾರವಾಗ್ತಿರುವುದನ್ನು ಕಂಡು ಖುಷಿ ಪಟ್ಟರು. ಬಳಿಕ ನುಡಿಸಿರಿ ಸ್ಟುಡಿಯೋ ನೋಡಿ ಬೆರಗಾದ ದೇಶಪಾಂಡೆಯವರು, ಜಿಲ್ಲೆಯಲ್ಲಿ ರಾಜ್ಯಮಟ್ಟದ ಸುದ್ದಿ ವಾಹಿನಿಗಳ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನೊಳಗೊಂಡಿರುವ ನುಡಿಸಿರಿ ವಾಹಿನಿ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

ನಮ್ಮ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿದ್ದ ವಾಹಿನಿಯ ಅವಶ್ಯಕತೆಯನ್ನು ನುಡಿಸಿರಿ ವಾಹಿನಿಯು ಪೂರೈಸಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನುಡಿಸಿರಿ ವಾಹಿನಿಯು ಜಿಲ್ಲೆಯ ಜನತೆಯ ಧ್ವನಿಯಾಗಿ ಕೆಲಸವನ್ನು ನಿರ್ವಹಿಸುತ್ತಿದೆ. ಆದಷ್ಟು ಬೇಗ ನುಡಿಸಿರಿ ವಾಹಿನಿ ರಾಜ್ಯಮಟ್ಟದ ವಾಹಿನಿಯಾಗಿ ಜಿಲ್ಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಲಿ ಎಂದು ಶುಭ ಹಾರೈಸಿದ್ರು..

ಈ ವೇಳೆ ನುಡಿಸಿರಿ ವಾಹಿನಿಯ ಸಂಪಾದಕ ಮಂಡಳಿ ಹಾಗೂ ವಾಹಿನಿಯ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.

ನುಡಿಸಿರಿ ನ್ಯೂಸ್‌, ಡೆಸ್ಕ್‌ ಹೊನ್ನಾವರ