ನೇತ್ರಾಣಿ ದ್ವೀಪದ ಬಳಿ ಸ್ಕೋಬಾ ಡೈವಿಂಗ್ ಮಾಡುವ ಮೂಲಕ ಸಮುದ್ರ ಅಲದಲ್ಲಿರುವ ಹೊಸ ಜಗತ್ತನ್ನು ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್

ಭಟ್ಕಳ:ಮುರುಡೇಶ್ವರ ನೇತ್ರಾಣಿ ದ್ವೀಪದ ಬಳಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಮ್ಮ ಕುಟುಂಬ ಸಮೇತರಾಗಿ ಸ್ಕೋಬಾ ಡೈವಿಂಗ್ ಮಾಡುವ ಮೂಲಕ ಸಮುದ್ರ ಅಲದಲ್ಲಿರುವ ಹೊಸ ಜಗತ್ತನ್ನು ವೀಕ್ಷಣೆ ಮಾಡಿದರು.

ಮುರುಡೇಶ್ವರದ ಅಕ್ವಾ ರೈಡ್ ಜಲ ಕ್ರೀಡೆ ಸಂಸ್ಥೆಯ ನೆರವಿನೊಂದಿಗೆ ದೋಣಿ ಮೂಲಕ ತಮ್ಮ 15 ಜನ ಕುಟುಂಬ ಸದಸ್ಯರ ತಂಡದೊಂದಿಗೆ ನೇತ್ರಾಣಿ ದ್ವೀಪದ ಬಳಿ ತೆರಳಿ ಸ್ಕೋಬಾ ಡೈವಿಂಗ್ ಮಾಡಿ ಸಮುದ್ರದಾಳದಲ್ಲಿರುವ ಇನ್ನೊಂದು ಪ್ರಪಂಚವನ್ನು ವೀಕ್ಷಣೆ ಮಾಡಿದರು.


ಕೆಲಸದ ಒತ್ತಡದ ನಡುವೆಯೂ ಸಾಗರದ ಆಳದಲ್ಲಿನ ಕಡಲ ಈ ಕ್ರೀಡೆಯ ಕುರಿತು ಅವರಿಗೆ ಇರುವ ಆಸಕ್ತಿ ಮತ್ತು ಮುತುವರ್ಜಿಯ ಜಿಲ್ಲಾಧಿಕಾರಿಯ ಈ ನಡೆ ಮೆಚ್ಚುಗೆಗೆ ಕಾರಣವಾಗಿದೆ. ಕ್ರಿಸ್ ಮಸ್ ರಜೆ ಹಿನ್ನೆಲೆಯಲ್ಲಿ ಮುರುಡೇಶ್ವರಕ್ಕೆ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದ್ದು ಮುರುಡೇಶ್ವರ ಹಾಗೂ ನೇತ್ರಾಣಿ ದ್ವೀಪದ ವೀಕ್ಷಿಸುದರ ಜೊತೆಯಲ್ಲಿ ಸ್ಕೋಬಾ ಡೈವಿಂಗ್ ಮಾಡುವುದರ ಮೂಲಕ ತಮ್ಮ ರಜೆಯನ್ನು ಅನಂದಿಸಿದರು