ದಾಂಡೇಲಿಯಲ್ಲಿ ಹಳಿಯಾಳ ಉಪ‌ವಿಭಾಗದ ಗಸ್ತು ಅರಣ್ಯಪಾಲಕರ ಹಾಗೂ ಅರಣ್ಯ ವೀಕ್ಷಕರ ಸಂಘಕ್ಕೆ ನೂತನ‌ ಪದಾಧಿಕಾರಿಗಳ ಆಯ್ಕೆ

ದಾಂಡೇಲಿ : ಅರಣ್ಯ ಇಲಾಖೆಯ ಹಳಿಯಾಳ ಉಪ ವಿಭಾಗದ ಗಸ್ತು ಅರಣ್ಯಪಾಲಕರ ಹಾಗೂ ಅರಣ್ಯ ವೀಕ್ಷಕರ ಸಂಘಕ್ಕೆ ನೂತನ‌ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಗರದ ಹಾರ್ನಬಿಲ್ ಸಭಾ ಭವನದಲ್ಲಿ ಜರುಗಿತು.

ಮುಂದಿನ ಐದು ವರ್ಷದ ಅವಧಿಗೆ ನಡೆದ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಂಘದ ನೂತನ ಸಾಲಿಗೆ ಅಧ್ಯಕ್ಷರಾಗಿ ರಮೇಶ್ ಬಿಳೆಕಲ್ಲ್, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೇಶ್ವರ ಕುಬಸದ ಮತ್ತಿ ಖಜಾಂಚಿಯಾಗಿ ಶ್ರೀಶೈಲ್ ಬರ್ಲಿ ಅವರು ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಹಳಿಯಾಳ ಉಪ‌ವಿಭಾಗದ ಗಸ್ತು ಅರಣ್ಯಪಾಲಕರು ಹಾಗೂ ಅರಣ್ಯ ವೀಕ್ಷಕರು ಉಪಸ್ಥಿತರಿದ್ದರು.