ಸಿದ್ದಾಪುರದ ಕಾನಗೋಡ ಗ್ರಾ.ಪಂಚಾಯತ್‌ನಲ್ಲಿ ಪಿಂಚಣಿ ದಿವಸ್‌ ಹಾಗೂ ಕಂದಾಯ ಅದಾಲತ್‌ ಕಾರ್ಯಕ್ರಮ


ಸಿದ್ದಾಪುರದ ಕಾನಗೋಡ ಗ್ರಾ. ಪಂಚಾಯತ್‌ನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕೊಂಡ್ಲಿ ಹೋಬಳಿಯ ಪಿಂಚಣಿ ದಿವಸ್‌ ಹಾಗೂ ಕಂದಾಯ ಅದಾಲತ್‌ ಕಾರ್ಯಕ್ರಮವನ್ನು ತಹಶಿಲ್ದಾರ್‌ ಎಂ. ಆರ್ ಕುಲಕರ್ಣಿ ದೀಪ ಬೆಳಗಿಸುವುರ ಮೂಲಕ ಚಾಲನೆ ನೀಡಿದ್ರು..

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, 30 ಪಿಂಚಣಿ ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಿ ಸ್ಥಳದಲ್ಲೇ ಮಂಜೂರಿ ಆದೇಶ ನೀಡಲಾಯ್ತು. ಹಾಗೂ ಕಂದಾಯ ಅದಾಲತ್ 3 ಅರ್ಜಿ ಸ್ವೀಕರಿಸಲಾಯ್ತು. ಮತ್ತು ಕಂದಾಯ ಅದಾಲತ್‌ ಕುರಿತಂತೆ ಸವಿಸ್ತಾರವಾವಿ ಮಾಹಿತಿ ನೀಡಿದ್ರು..

ಈ ವೇಳೆ ಸ್ಥಳೀಯ ಪಂಚಾಯತ್ ಅಧ್ಯಕ್ಷ ಶಿವರಾಯ ಕೊತ್ಯಾಲ್, ಉಪಾಧ್ಯಕ್ಷೆ ಗಂಗಮ್ಮ ಭೋವಿ, ಪಂ ಸದಸ್ಯ ಎಚ್. ಕೆ. ಶಿವಾನಂದ, ಗ್ರಾಪಂ , ಪಿ ಡಿ ಒ ಪ್ರೀತಿ ಶೆಟ್ಟಿ, ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮ ಸಹಾಯಕರು ಹಾಗೂ ಸ್ಥಳೀಯ ಸಾರ್ವಜನಿಕರು ಇತರರು ಉಪಸ್ಥಿತರಿದ್ರು…