ಎದುರಿಗೆ ಬಂದ ರಿಕ್ಷಾ ತಪ್ಪಿಸಲು ಹೋಗಿ ಗಟಾರಕ್ಕಿಳಿದ ಸರ್ಕಾರಿ ಬಸ್ – ಹೊನ್ನಾವರದ ಹಂದಿಮುಲ್ಲೆಯ ಬಳಿ ಘಟನೆ ತಪ್ಪಿದ ಭಾರಿ ಅನಾಹುತ

ಹೊನ್ನಾವರ ತಾಲೂಕಿನ ಹಂದಿಮುಲ್ಲೆಯ ಸಮೀಪ ಇಕ್ಕಾಟ್ಟಾದ ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ರಿಕ್ಷಾ ತಪ್ಪಿಸಲು ಹೋಗಿ ಸರ್ಕಾರಿ ಬಸ್ಸೊಂದು ರಸ್ತೆಯ ಪಕ್ಕದ ಗಟಾರಕ್ಕಿಳಿದು ಭಾರಿ ಅನಾಹುತ ತಪ್ಪಿದ ಘಟನೆ ನಡೆದಿದೆ…

ಹೊನ್ನಾವರದಿಂದ ಹಿರೇಬೈಲ್ ಆರ್ಮುಡಿಗೆ ತೆರಳಿದ್ದ ಬಸ್, ಪುನಃ ಹಿಂದಿರುಗಿ ಹೊನ್ನಾವರಕ್ಕೆ ಪ್ರಯಾಣಿಕರನ್ನು ಕರೆತರುತ್ತಿದ್‌ ವೇಳೆ ಈ ಘಟನೆ ನಡೆದಿದೆ‌. ಬಸ್ ಎಡಬದಿ ಚಕ್ರ ಗಟಾರಕ್ಕೆ ಜಾರಿದ್ದು, ಬಲಬದಿ ರಸ್ತೆಯಂಚಿನಲ್ಲಿತ್ತು. ಬಸ್‌ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ರು. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ, ಗಾಯನೋವು ಸಂಭವಿಸಿಲ್ಲ…

ಇನ್ನು ಈ ಬಗ್ಗೆ ಸಂಭಂದಪಟ್ಟ ಸಾರಿಗೆ ಅಧಿಕಾರಿಗಳಿಗೆ ರಸ್ತೆಯನ್ನು ಅಗಲಿಕರಣ ಮಾಡುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಏನಾದ್ರು ದೊಡ್ಡ ಅನಾಹುತವಾದ್ರೆ, ಯಾರು ಹೊಣೆಗಾರರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದ್ದು, ರಸ್ತೆ ಅಗಲಿಕರಣ ಮಾಡುವಂತೆ ಆಗ್ರಹ ಕೇಳಿ ಬಂದಿದೆ. ಇನ್ನಾದ್ರೂ ಸಂಭಂದಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ…