ಮಾಜಾಳಿಯಲ್ಲಿ ಸಿಎಂರನ್ನ ಅದ್ಧೂರಿಯಾಗಿ ಸ್ವಾಗತಿಸಿದ ನಗರ ಹಾಗೂ ಗ್ರಾಮೀಣ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು

ಕಾರವಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಅರ್.ಅಶೋಕ್ ಅವರನ್ನು ಕಾರವಾರದ ಗಡಿ ಪ್ರದೇಶವಾದ ಮಾಜಾಳಿ ಗೇಟ್ ಬಳಿ ಶಾಸಕಿ ರೂಪಾಲಿ ಎಸ್.ನಾಯ್ಕ ಹಾಗೂ ಭಾರತೀಯ ಜನತಾಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ಭಟ್ಕಳದಲ್ಲಿ ಪ್ರವಾಹ ಹಾನಿ ಪರಿಶೀಲನೆಗಾಗಿ ಗೋವಾದಿಂದ ತೆರಳುತ್ತಿದ್ದ ಮುಖ್ಯಮಂತ್ರಿ ಅವರನ್ನು ಕಾರವಾರ ಹಾಗೂ ಅಂಕೋಲಾ ವಿಧಾನಸಭಾ ಕ್ಷೇತ್ರದ ಜನತೆಯ ಪರವಾಗಿ ಶಾಸಕರು ಮತ್ತು ಬಿಜೆಪಿಯ ಕಾರವಾರ ನಗರ ಹಾಗೂ ಗ್ರಾಮೀಣ ಘಟಕದ ಕಾರ್ಯಕರ್ತರು ಸೇರಿ ಸ್ವಾಗತಿಸಿದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಶಾಸಕರೊಂದಿಗೆ ಆತ್ಮೀಯವಾಗಿ ಮಾತನಾಡಿದರಲ್ಲದೆ, ಕಾರ್ಯಕರ್ತರ ಕುಶಲೋಪರಿಯನ್ನೂ ವಿಚಾರಿಸಿದರು. ಇದರಿಂದ ಕಾರ್ಯಕರ್ತರು ಸಂತಸಗೊಂಡರು.

ಮುಖ್ಯಮಂತ್ರಿ ಅವರ ಆಗಮನ ವಿಳಂಬವಾಗಿದ್ದರಿಂದ ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರು, ಗೃಹ ಸಚಿವರೂ ಆದ ಅಮಿತ್ ಶಾ ಬೆಂಗಳೂರಿಗೆ ಬರಲಿರುವ ಹಿನ್ನೆಲೆಯಲ್ಲಿ ಸಮಯಾಭಾವದಿಂದಾಗಿ ನೇರವಾಗಿ ಭಟ್ಕಳಕ್ಕೆ ತೆರಳಿದರು.