ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಯಶಸ್‌ಗೆ ಕಂಚಿನ ಪದಕ

ಅಂಕೋಲಾ: ಕೊಯಮತ್ತೂರಿನಲ್ಲಿ ನಡೆದ 38 ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಶಸ್ ಪ್ರವೀಣ ಕುರುಬರ್, U-18 ವಯೋಮಿತಿಯ ಹ್ಯಾಮರ್ ಎಸೆತದಲ್ಲಿ 65.44 ಮೀ. ದೂರ ಎಸೆದು ಕಂಚಿನ ಪದಕ ಗಳಿಸಿದ್ದಾನೆ.
ಉದಯೋನ್ಮುಖ ಕ್ರೀಡಾಪಟು ಯಶಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಗಳಿಸಲಿ ಎಂದು ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಕೆ.ಆರ್. ನಾಯಕ ಬೇಲೆಕೇರಿ ಹಾಗೂ ಸಂಸ್ಥೆಯ ಅಧ್ಯಕ್ಷ ಸದಾನಂದ ಎಂ. ನಾಯ್ಕ ಹಾರೈಸಿದ್ದಾರೆ.