ಹೊನ್ನಾವರ ಹೊಸಗೋಡ ಗ್ರಾಮಕ್ಕೆ ಭೇಟಿ ನೀಡಿದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ.

ಹೊನ್ನಾವರ:ತಾಲೂಕಿನ ಚಿಕ್ಕನಗೋಡ ಗ್ರಾಪಂ ವ್ಯಾಪ್ತಿಯ, ಹೊಸಗೋಡ ಗ್ರಾಮದಲ್ಲಿ ಅರಣ್ಯ ಸಿಬ್ಬಂದಿಗಳು ಒಕ್ಕಲೆಬ್ಬಿಸಿದ ಪ್ರಕ್ರಿಯೆಯಲ್ಲಿ ವರ್ತಿಸಿದ ರೀತಿ ಮತ್ತು ನೀತಿ ಕಾನೂನಿಗೆ ವ್ಯತಿರಿಕ್ತ. ಅರಣ್ಯ ಸಿಬ್ಬಂದಿಗಳ ವರ್ತನೆ ಅಮಾನವಿಯ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅಭಿಪ್ರಾಯ ವ್ಯಕ್ತಪಡಿಸಿತು.

ಅಕ್ಟೋಬರ್ 20 ರಂದು ತಾಲೂಕಿನ, ಚಿಕ್ಕನಗೋಡ ಗ್ರಾಮ ಪಂಚಾಯಿತಿಯ, ಹೊಸಗೋಡ ಗ್ರಾಮದ ಲಕ್ಷ್ಮೀ ತಿಮ್ಮ ಗೌಡ ಅವರ ಅತಿಕ್ರಮಣ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿಗಳು ದೌರ್ಜನ್ಯ ವೆಸಗಿರುವ ಸ್ಥಳಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮತ್ತು ತಾಲೂಕ ಅಧ್ಯಕ್ಷ ಚಂದ್ರಕಾಂತ ಕೋಚರೇಕರ್ ಅವರ ನೇತ್ರತ್ವದಲ್ಲಿ ಹೋರಾಟಗಾರರ ವೇದಿಕೆಯ ನಿಯೋಗವು ಭೇಟಿ ನೀಡಿ ಸ್ಥಳ ಪರಿಶಿಲಿಸಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ನಿರ್ದಿಷ್ಟ ಗಡಿ ಬೇಲಿಯ ಒಳಗಡೆ 15-20 ವರ್ಷದ ಗೇರು, 6-7 ವರ್ಷದ ಅಡಿಕೆಗಿಡ ಇರುವಂತಹ ಪ್ರದೇಶದಲ್ಲಿ, ಅಲ್ಪಾವಧಿ ಬೆಳೆಯ ಇರುತ್ತದೆ. ಗಿಡ-ಮರ ಕಡಿದಿರುವುದು ನಿಯೋಗದ ಗಮನಕ್ಕೆ ಬಂದಿದ್ದು ಅರಣ್ಯವಾಸಿ ಮಹಿಳಾ ಸದಸ್ಯರೊಂದಿಗೆ ರಾತ್ರಿ ವೇಳೆ ಅಸಭ್ಯವಾಗಿ ವರ್ತಿಸಿರುವುದು, ಅಪ್ರಾಪ್ತ ವಯಸ್ಸಿನ ಅರಣ್ಯವಾಸಿ ಕುಟುಂಬದ ಹುಡಗನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವ ಕ್ರಮ ಅರಣ್ಯ ಸಿಬ್ಬಂದಿಗಳ ಕರ್ತವ್ಯ ಚ್ಯುತಿ ಮತ್ತು ಕಾನೂನು ಬಾಹಿರ ಕೃತ್ಯವೆಂದು ಅವರು ಆಪಾದಿಸಿದ್ದಾರೆ. ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯಕ್ಕೆ ಸ್ಥಳೀಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಇವರು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅರಣ್ಯವಾಸಿ ಕುಟುಂಬಗಳ ಮೇಲೆ, ಅಸಭ್ಯ ಹಾಗೂ ಕ್ರಿಮಿನಲ್ ಚಟುವಟಿಕೆ ಎಸಗಿದ ಅರಣ್ಯ ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮತ್ತು ತಾಲೂಕ ಅಧ್ಯಕ್ಷ ಚಂದ್ರಕಾಂತ ಕೋಚರೇಕರ್ ಮಾತನಾಡಿದ್ರು
ನಿಯೋಗದಲ್ಲಿ ಜಿಲ್ಲಾ ಸಂಚಾಲಕರಾದ ರಾಮಾ ಮರಾಠಿ,ಮಹೇಶ ನಾಯ್ಕ , ವಿನೋದ ನಾಯ್ಕ, ಸಂಕೇತ ನಾಯ್ಕ, ಸುರೇಶ ನಾಯ್ಕ, ಸುರೇಶ ಗೌಡ, ನಾಗರಾಜ ಹೆಗಡೆ, ಶ್ರೀಧರ ಶೆಟ್ಟಿ, ಹೇರಂಬ ಗೌಡ, ಸುರೇಶ ಗೌಡ, ಉಮೇಶ ನಾಯ್ಕ ಹಾಗೂ ನೂರಾರು ಅರಣ್ಯವಾಸಿಗಳು ಉಪಸ್ಥಿತರಿದ್ದರು.