ಯಲ್ಲಾಪುರದಲ್ಲಿ ಸೋಮವಾರ ಸಂಜೆ ಸುರಿದ ಮಳೆಯಿಂದ ಅಂಗಡಿ, ಮನೆಗಳಿಗೆ ನುಗ್ಗಿದ ನೀರು

ಯಲ್ಲಾಪುರ: ಪಟ್ಟಣದ ರವಿಂದ್ರನಗರದ ಶಿರಸಿ ರಸ್ತೆಯ ಪಕ್ಕ ಅಸಮರ್ಪಕ ಕಾಮಗಾರಿಯಿಂದಾಗಿ ಸೋಮವಾರ ಸಂಜೆ ಸುರಿದ ಮಳೆಗೆ ಗಟಾರ ನೀರು ಮನೆ, ಹೋಟೆಲ್, ಅಂಗಡಿಗಳಿಗೆ ನುಗ್ಗಿ ಸ್ಥಳಿಯ ನಿವಾಸಿಗಳು ಪರದಾಡಿದರು.

ಮಳೆ ಒಮ್ಮೇಲೆ ರಭಸವಾಗಿ ಸುರಿದಿದೆ. ಶಿರಸಿ ರಸ್ತೆಯ ಪಿಎಲ್ಡಿ ಬ್ಯಾಂಕ ಎದುರಿನ ಬಡಾವಣೆಯಲ್ಲಿ ಗಟಾರ ನೀರು ಮನೆಗೆ ಯೊಳಕ್ಕೆ,ಸಂಪೂರ್ಣ ಹೋಟೆಲ್,ಶ್ರೀಮಾತಾ ಡ್ರೈವಿಂಗ್ ಸ್ಕೂಲ್ ಇತ್ಯಾದಿಗಳ ಒಳಕ್ಕೆ ಹರಿದ ರಿಂದ ನೀರು ಹೊರ ಹಾಕಲು ಪ್ರಯಾಸ ಪಟ್ಟರು. ಗಟಾರ ವ್ಯವಸ್ಥೆ ಆಗದೇ ಇರುವ ಬಗೆಗೆ ಜನ ಹಿಡಿಶಾಪ ಹಾಕಿದರು.

ಎಪಿಎಂಸಿ ರಸ್ತೆಯ ಕಾಮಗಾರಿ ನಡೆಯಿತ್ತಿದೆ. ಗಟಾರ ಕಾಮಗಾರಿ ಉಳಿದೆಲ್ಲ ಕಡೆ ಆಗುತ್ತಿದೆ.ಆದರೆ ಈ ಪ್ರದೇಶದಲ್ಲಿ ಹಿಂದೆ ಅಳವಡಿಸಿದ್ದ ಪೈಪ್ ಕಿತ್ತು,ಒಡೆದು ಬದಿಗೆ ಹಾಕಿ ವರ್ಷವೇ ಕಳೆದಿದೆ.ಆದರೆ ಪಕ್ಕಾ ಗಟಾರ ಇನ್ನೂ ಮಾಡಿಲ್ಲ. ಸುತ್ತ‌ಮುತ್ತ ಪಕ್ಕಾ ಗಟಾರ ಕೆಲಸ ನಡೆದಿದೆ. ಈ ಪ್ರದೇಶದಲ್ಲಿ ಕಾಮಗಾರಿ ಆಗುವುದು ಬಾಕಿ ಇದೆ.
ಮೊದಲಿದ್ದ ಪೈಪ್ ತೆಗೆದಿದ್ದು,ಹೊಸ ಗಟಾರ ಆಗದೇ ಇರುವುದು ಅವ್ಯವಸ್ಥೆಗೆ ಕಾರಣವಾಗಿದೆ.
ಮಳೆಗೆ ಗಟಾರ‌ ನೀರು ನುಗ್ಗಿರುವ ಬಗ್ಗೆ ‌ನಿವಾಸಿಗಳು ಬೇಸರಿಸಿದ್ದಾರೆ.

ಕಾರಣ ಈ ಬಗ್ಗೆ ಲೊಕೊಪಯೊಗಿ ಇಲಾಖೆಯವರು ಗಮನಹರಿಸಿ,ಈಪ್ರದೇಶದಲ್ಲಿ ತುರ್ತು ಕಾಮಗಾರಿ ಕೈಗೊಂಡು ಮನೆಗೆ ಅಂಗಡಿಗಳಿಗೆ ನೀರು ನುಗ್ಗುವುದನ್ನು ತಡೆಯುವ ಬಗ್ಗೆ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.