ದಾಂಡೇಲಿಯಲ್ಲಿ ಕರ್ನಾಟಕ‌ ಒನ್ ಕೇಂದ್ರಗಳೆಡನ್ನು ಉದ್ಘಾಟಿಸಿದ ಆರ್.ವಿ.ದೇಶಪಾಂಡೆ

ದಾಂಡೇಲಿ : ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಜೆ.ಎನ್ ರಸ್ತೆಯಲ್ಲಿರುವ ನಗರ ಸಭೆಯ ಮಳಿಗೆಯಲ್ಲಿ ಗುರುಶಾಂತ್ ಜಡೆಹಿರೇಮಠ್ ಅವರ ಹೆಸರಿನಲ್ಲಿ ಮಂಜೂರು ಗೊಂಡ ಕರ್ನಾಟಕ ಒನ್ ಕೇಂದ್ರವನ್ನು ಸೋಮವಾರ ಶಾಸಕರಾದ ಆರ್ ವಿ ದೇಶಪಾಂಡೆ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆರ್ ವಿ ದೇಶಪಾಂಡೆ ಅವರನ್ನು ಗುರುಶಾಂತ್ ಜಡೆಹಿರೇಮಠ್ ದಂಪತಿಗಳು ಮತ್ತು ಕುಟುಂಬಸ್ಥರು ಗೌರವಪೂರ್ವಕವಾಗಿ ಸ್ವಾಗತಿಸಿದರು.

ನೂತನ ಕೇಂದ್ರಕ್ಕೆ ಶುಭ ಕೋರಿದ ದೇಶಪಾಂಡೆಯವರು ನಗರದ ಜನತೆ ಈ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಆರ್.ಹೆಗಡೆ, ಕಾಂಗ್ರೆಸ್ ಮುಖಂಡರುಗಳಾದ ಮುನ್ನ ವಹಾಬ್, ದಿವಾಕರ ನಾಯ್ಕ, ರಫೀಕ್ ಗಾಂಧಿನಗರ ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು.

ನಂತರ ಹಳೆ ದಾಂಡೇಲಿಯಲ್ಲಿ ಪರಶುರಾಮ್ ಪಾತ್ರೋಟ್ ಅವರ ಹೆಸರಿನಲ್ಲಿ ಮಂಜೂರಾದ ಕರ್ನಾಟಕ ಒನ್ ಕೇಂದ್ರವನ್ನು ಆರ್.ವಿ.ದೇಶಪಾಂಡೆ ಅವರು ಉದ್ಘಾಟನೆ ಮಾಡಿದರು.