ಸಿದ್ದಾಪುರದಲ್ಲಿ ರೈತ ಸಂಘ ಸೇರ್ಪಡೆ ಕಾರ್ಯಕ್ರಮ

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆರಿಯಪ್ಪ ನಾಯ್ಕ್ ನೇತೃತ್ವದಲ್ಲಿ ತಾಲೂಕಿನ ಇರಾಸೆ ಹಾಗೂ ಬೆಣ್ಣೆಕೇರಿಯಲ್ಲಿ ರೈತ ಸಂಘ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಸುಮಾರು 60ಕ್ಕೂ ಹೆಚ್ಚು ರೈತರು ಸಂಘಟನೆ ಸೇರ್ಪಡೆಗೊಂಡರು. ತಾಲೂಕಿನಲ್ಲಿ ರೈತರು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದು ಸರಿಯಾದಂತಹ ಸಂಘಟನೆ ಇಲ್ಲದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಾಗದೆ ರೈತರು ಸಂಕಷ್ಟ ಎದುರಿಸುತ್ತಿದ್ದರು ಆದರೆ ನಮ್ಮ ಸಂಘಟನೆಯ ಕಾರ್ಯಾಚಟುವಟಿಕೆಯನ್ನು ನೋಡಿ ಈಗ ಸೇರ್ಪಡೆಗೊಳ್ಳುತ್ತಿದ್ದಾರೆ ನಿಜಕ್ಕೂ ಕೂಡ ಸಂತೋಷದ ವಿಷಯ, ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನಮ್ಮ ಬಳಿ ಹೇಳಿಕೊಳ್ಳಿ ಸಾಧ್ಯವಾದಷ್ಟು ಪರಿಹಾರವನ್ನು ನೀಡುವಂತಹ ಪ್ರಯತ್ನವನ್ನು ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಇಲಿಯಾಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.