ಮಹಾ ನಾಯಕ ಡಾ. ಬಿ ಆರ್ ಅಂಬೇಡ್ಕರ್ ಸೇನೆ ಹಾಗೂ ಆದಿ ಜಾಂಬವಂತ ಸಂಘ ಹೊನ್ನಾವರ ತಾಲೂಕು ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆ

ಹೊನ್ನಾವರ: ಮಹಾ ನಾಯಕ ಡಾ. ಬಿ ಆರ್ ಅಂಬೇಡ್ಕರ್ ಸೇನೆ ಹಾಗೂ ಆದಿ ಜಾಂಬವಂತ ಸಂಘ ಹೊನ್ನಾವರ ತಾಲೂಕು ಸಮಿತಿ ವತಿಯಿಂದ ಪಟ್ಟಣದಲ್ಲಿನ ಸಂಘದ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಿದರು.

ಮಹರ್ಷಿ ವಾಲ್ಮೀಕಿ ಹಾಗೂ ಸಂವಿಧಾನ ಪಿತಾಮಹ ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂಘಟನೆಯ ತಾಲೂಕ ಅಧ್ಯಕ್ಷ ಶ್ರೀಕಾಂತ ಹಳ್ಳೇರ್,ಮಾದೇವ್ ಹಳ್ಳೇರ್ ಕಾರ್ಯಕ್ರಮ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ದೇವೇಂದ್ರ ಹಳ್ಳೇರ್, ಉಪಾಧ್ಯಕ್ಷ ಗಣಪತಿ ಹಳ್ಳೇರ್, ಪ್ರಧಾನ ಕಾರ್ಯದರ್ಶಿ ಮಾದೇವ ಹಳ್ಳೇರ್, ಚಂದ್ರು ಹಳ್ಳೇರ್,ಮಂಜುನಾಥ ಹಸ್ಲರ್, ನಾಯಣ ಮುಕ್ರಿ, ಬಾಲಕೃಷ್ಣ ಹಳ್ಳೇರ್, ಮಂಜುನಾಥ ಹಳ್ಳೇರ್, ಧರ್ಮ ಹಳ್ಳೇರ್, ಜಾನಕಿ ಹಸ್ಲರ್, ಫಾತಿಮಾ ಎಂ ಪಾನಿಬುಡೆ, ಫಿಲೋಮಿನಾ ಎ ರೊಡ್ರಗೀಸ್,ರಾಜೇಶ ಹಳ್ಳೇರ್, ಚಂದ್ರು ಹಸ್ಲರ್, ಕೌಸಿಕ್ ಹಳ್ಳೆರ್, ಸುಭಾಸ್ ಹಸ್ಲರ್ ಉಪಸ್ಥಿತರಿದ್ದರು.