ಭಟ್ಕಳದಲ್ಲಿ ಅಕ್ರಮ ಗೋ ಸಾಗಣೆ – ವದೆ ಸಮಯದಲ್ಲಿ ದಾಳಿ ಮಾಡಿದ ಪೋಲೀಸ್‌ ಸಿಬ್ಬಂದಿ


ಭಟ್ಕಳ:- ಜನತಾ ಕೋ ಆಪರೇಟಿವ್‌ ಬ್ಯಾಂಕ್ ಹಿಂಭಾಗದ ಕಾರ ಸ್ಟ್ರೀಟ್ ಬಳಿ ಅಕ್ರಮವಾಗಿ ಗೋವನ್ನು ಕಳುವು ಮಾಡಿಕೊಂಡು ಬಂದು, ವದೆ ಮಾಡುವ ವೇಳೆ ಪೋಲೀಸರು ದಾಳಿ ಮಾಡಿ ಗೋವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ…

ಆರೋಪಿಗಳನ್ನು ಮೊಹಮ್ಮದ ಅಬಾನ್ ಶಬ್ಬೀರ್ ಜೋಗ್ಲೇ ಹಾಗೂ ಜಮೀಲ್ ಜುಬೇರ್ ಶರೀಫ್ ಎಂದು ಗುರುತಿಸಲಾಗಿದೆ. ಇವರು ವದೆ ಮಾಡುವ ಉದ್ದೇಶದಿಂದ 20 ಸಾವಿರ ಮೌಲ್ಯದ ಒಂದು ಗೋವನ್ನುಎಲ್ಲಿಂದಲೊ ಕಳುವು ಮಾಡಿ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು, ಹಿಂಸಾತ್ಮಕವಾಗಿ ಕಟ್ಟಿ ವದೆ ಮಾಡುವ ತಯಾರಿಯಲ್ಲಿದ್ದರು. ಈ ವೇಳೆ ಪೊಲೀಸರು ದಾಳಿ ಮಾಡಿದಾಗ, ಹೋರಿಯನ್ನು ಕಟ್ಟಿದ ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದಯ್‌ ನಾಯ್ಕ, ನುಡಿಸಿರಿ ನ್ಯೂಸ್‌, ಭಟ್ಕಳ