ಗುಣವಂತೆಯ ಶಂಭುಲಿಂಗೇಶ್ವರ ದೇವಾಲಯದ ಅಡಿಗಲ್ಲು ಸಮಾರಂಭ ಉದ್ಘಾಟಿಸಿದ ಸುನೀಲ್‌ ಶೆಟ್ಟಿ


ಹೊನ್ನಾವರ:- ಪುರಾಣ ಪ್ರಸಿದ್ಧ ಗುಣವಂತೆಯ ಶಂಭುಲಿಂಗೇಶ್ವರ ದೇವಾಲಯವನ್ನು ಶಿಲಾಮಯಗೊಳಿಸುವ ಸಂಕಲ್ಪ ಮಾಡಿರುವ ಖ್ಯಾತ ಉದ್ಯಮಿ ಸುನಿಲ ಆರ್ ಶೆಟ್ಟಿ, ನೆರೆದ ಸಾವಿರಾರು ಶಿವಭಕ್ತರ ಸಮ್ಮುಖದಲ್ಲಿ ವೇ ಮೂ ಜಯರಾಮ ಅಡಿ, ಹಾಗೂ ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್ ರವರ ಆಚಾರ್ಯತ್ವದಲ್ಲಿ ಗಣ ಹೋಮ, ಶಿಲಾನ್ಯಾಸ ಹೋಮ, ಶಿಲಾ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿದ್ರು.



ಈ ವೇಳೆ, ಆಡಳಿತ ಮಂಡಳಿಯ ಅಧ್ಯಕ್ಷ ನರಸಿಂಹ ಪಂಡಿತ, ಪ್ರಧಾನ ಕಾರ್ಯದರ್ಶಿ ಎಂ ಎಸ್ ಹೆಗಡೆ,ಎಂ ವಿ ಹೆಗಡೆ, ಧರ್ಮ ನಾಯ್ಕ, ಶಿವಾನಂದ ನಾಯ್ಕ, ಶಿವಾನಂದ ಗೌಡ, ಗೋವಿಂದ ಗೌಡ, ಶಂಕರ ಗೌಡ, ಸುರೇಶ ಆಚಾರ್ಯ ಮೊದಲಾದವರು ಉಪಸ್ಥಿತರಿದ್ರು. ಸಾವಿರಾರು ಶಿವಭಕ್ತರು ಮಹಾ ಅನ್ನಪ್ರಸಾದವನ್ನು ಸ್ವೀಕರಿಸಿ ಪುನೀತರಾದ್ರು. ಬಳಿಕ ರಾತ್ರಿ “ಭಜನಾ” ಕಾರ್ಯಕ್ರಮವು ನೆರವೇರಿತು.