ಗುಂದ ಅರಣ್ಯ ಇಲಾಖೆಯ ವತಿಯಿಂದ ನಂದಿಗದ್ದಾದಲ್ಲಿರುವ ರಂಗಮಂದಿರದಲ್ಲಿ ವಿಶ್ವ ಹಾವುಗಳ ದಿನಾಚರಣೆ.

ಜೋಯಿಡಾ : ತಾಲೂಕಿನ ಗುಂದ ಅರಣ್ಯ ಇಲಾಖೆಯ ವತಿಯಿಂದ ನಂದಿಗದ್ದಾ ರಂಗಮಂದಿರದ ಮುಂಭಾಗದಲ್ಲಿ ವಿಶ್ವ ಹಾವುಗಳ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಉರಗಪ್ರೆಮಿ ಸಿ.ಆರ್ ನಾಯ್ಕ, ಸಿದ್ದೇಶ್ವರ ,ಡಾ ಪ್ರದೀಪ್ ಹಾವುಗಳ ಬಗ್ಗೆ ವಿಶೇಷ ‌ಮಾಹಿತಿ ನೀಡಿ ಹಾವು ಕಚ್ಚಿದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ನಂದಿಗದ್ದಾ ಗ್ರಾಮ ಪಂಚಾಯತ್ ಅಧ್ಯಕ್ಷ ಅರುಣ ದೇಸಾಯಿ, ಉಪಾಧ್ಯಕ್ಷೆ ದಾಕ್ಷಾಯಿಣಿ ದಾನಶೂರ, ಸದಸ್ಯ ಧವಳೋ ಸಾವರಕರ, ಅರಣ್ಯ ಇಲಾಖೆಯ ರಾಜಶೇಖರ ಕಟಗೇರಿ, ಮಧು ಜಿ, ಶರತ್ ಐಹೊಳೆ, ಅಶೋಕ ಕಾಂಬಳೆ ಹಾಗೂ ಇನ್ನೀತರ ಸಿಬ್ಬಂದಿಗಳು, ಊರ ನಾಗರಿಕರು ಉಪಸ್ಥಿತರಿದ್ದರು.