ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕದ ವತಿಯಿಂದ ನಿವೃತ್ತ ಸೈನಿಕರ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ

ಹೊನ್ನಾವರ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕದ ವತಿಯಿಂದ ನಿವೃತ್ತ ಸೈನಿಕರು ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗಿಯಾದರು.

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕಾವೇರಿ ಹೋರಾಟದ ವಿಚಾರವಾಗಿ ದೆಹಲಿಯ ಜಂತರ್ ಮಂತರ್ ಗೆ ಹೋರಾಟಕ್ಕೆ ತೆರಳಿದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಮಂಜುನಾಥ್ ಗೌಡ ಅವರು ನಿವೃತ್ತ ಸೈನಿಕರು ಹೋರಾಟಕ್ಕೆ ಬೆಂಬಲಿಸಿದರು. ನಿವೃತ್ತ ಸೈನಿಕರು ಹೋರಾಟ ಮಾಡುತ್ತಿರುವುದನ್ನು ಕಂಡು ಅವರ ಬೆಂಬಲಕ್ಕೆ ನಿಂತು ಅವರ ಹೋರಾಟಕ್ಕೆ ಜೊತೆಯಾಗಿ ಬೆಂಬಲ ಸೂಚಿಸಿದರು.ನಿವೃತ್ತ ಸೈನಿಕರು ಹೊರಾಟ,ಪ್ರತಿಭಟನೆ ನಡೆಸುತ್ತಾರೆ ಎಂದರೆ ಪರಿಸ್ಥಿತಿ ಯಾವ ರೀತಿ ತಲುಪಿದೆ ಎನ್ನುವುದ ಅರ್ಥಮಾಡಿಕೊಳ್ಳಬೇಕಿದೆ ಎಂದರು.