ದಾಂಡೇಲಿಯ ಮಾರುತಿ ನಗರದ ಶ್ರೀ.ಜಗದಾಂಬ ದೇವಸ್ಥಾನದಿಂದ ಶ್ರೀ.ದುರ್ಗಾಮಾತಾ ದೌಡ್ ಕಾರ್ಯಕ್ರಮ

ದಾಂಡೇಲಿ : ಶ್ರೀ. ಶಿವ ಪ್ರತಿಷ್ಠಾನ ಹಿಂದುಸ್ಥಾನ ಇದರ ಆಶ್ರಯದಡಿ ನಡೆಯುತ್ತಿರುವ ಶ್ರೀ ದುರ್ಗಾಮಾತಾ ದೌಡ್ ಕಾರ್ಯಕ್ರಮವು ಇಂದು ಮಂಗಳವಾರ ಮೂರನೇ ದಿನಕ್ಕೆ ಮುಂದುವರಿದಿದೆ.

ಇಂದು ಮಾರುತಿ ನಗರದ ಶ್ರೀ.ಜಗದಾಂಬ ದೇವಸ್ಥಾನದಿಂದ ಆರಂಭಗೊಂಡ ಶ್ರೀ ದುರ್ಗಾಮಾತಾ ದೌಡ್ ಮೆರವಣಿಗೆಯು ಮಾರುತಿ ನಗರ, ಆಶ್ರಯ ಕಾಲೋನಿ, ಕಂಜಾರ್ ಬಾಟ್ ಪ್ರದೇಶದಲ್ಲಿ ಸಂಚರಿಸಿ ಕೊನೆಯಲ್ಲಿ ಗಾಂಧಿನಗರದ ಶ್ರೀ.ವಿಘ್ನೇಶ್ವರ ಮಾರುತಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.

ದುರ್ಗಾಮಾತಾ ದೌಡ್ ಮೆರವಣಿಗೆಯು ಸಂಚರಿಸುವ ರಸ್ತೆ ಯುದ್ಧಕ್ಕು ರಂಗೋಲಿ ಗಳನ್ನು ಹಾಕಲಾಗಿತ್ತು.‌ ಹಿಂದೂ ಧರ್ಮ ಬಾಂಧವರ ಮನೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ದುರ್ಗಾ ಮಾತ ಮೆರವಣಿಗೆಗೆ ಸ್ವಾಗತ ಕೋರಲಾಯಿತು.

ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಭಗವದ್ಭಕ್ತರು ಶ್ರೀ.ದುರ್ಗಾಮಾತಾ ದೌಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.