ಜೆವಿಡಿ ಕನ್ನಡ‌ ಮಾಧ್ಯಮ ಶಾಲೆಯಲ್ಲಿ ಮಕ್ಕಳ‌ ಶಿಬಿರಕ್ಕೆ ಚಾಲನೆ

ದಾಂಡೇಲಿ : ನಗರದ ಜೆವಿಡಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಸ್ಕೊಡ್ ವೆಸ್ ಹಾಗೂ ದೇಸಾಯಿ ಪೌಂಡೇಷನ್ ಟ್ರಸ್ಟ್ ಸಹಯೋಗದೊಂದಿಗೆ ಮಕ್ಕಳಿಗಾಗಿ ಆಯೋಜಿಸಲಾಗಿರುವ ರಜಾ ಶಿಬಿರಕ್ಕೆ ಭಾನುವಾರ ಚಾಲನೆಯನ್ನು ನೀಡಲಾಯಿತು

ಈ ಶಿಬಿರದಲ್ಲಿ ಮಕ್ಕಳಿಗೆ ಕರಾಟೆ, ನೃತ್ಯ ಹಾಗೂ ಚಿತ್ರಕಲೆ ಕುರಿತು ತರಬೇತಿ ನೀಡಲಾಯಿತು. ಈ ಕಾರ್ಯಕ್ರಮವನ್ನು ತರಬೇತಿದಾರರದ ಯಾಕೂಬ್, ಶೇಖ ಹಾಗೂ ಅಭಿಷೇಕ್ ಅಕಾಡಮಿಯ ಅಭಿಷೇಕ್. ಬಿ. ಪಾಟೀಲ್ ಅವರು ಉದ್ಘಾಟಿಸಿದರು.

ಮಹಿಳಾ ಸಾಂತ್ವನದ ಆಪ್ತ ಸಮಾಲೋಚಕಿ ಬಸತಂಮ್ಮ ನಾಯಕ, ಸಂಸ್ಥೆಯ ಸಿಬ್ಬಂದಿಗಳಾದ ಭಾರತಿ.ಡಿ.ನಾಯ್ಕ, ಪೂಜಾ ಬಾಲೇಶಗೋಳ, ಸುಧಾ.ಪಿ.ನಟೇಶ್ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.