ಸಿದ್ದಾಪುರದ ಹುಸೂರಿನಲ್ಲಿ ನಮ್ಮೂರ-ನಮ್ಮ ಕೆರೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ


ಸಿದ್ದಾಪುರ :- ತಾಲೂಕಿನ ಹುಸೂರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾ.ಪ ಹಲಗೇರಿ ಹಾಗೂ ಹುಸೂರು ಕೆರೆ ಅಭಿವೃದ್ಧಿ ಸಮಿತಿ ಸಹಭಾಗಿತ್ವದಲ್ಲಿ ನಮ್ಮೂರು-ನಮ್ಮ ಕೆರೆ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದ್ರು..

ತಾಲೂಕಿನ ಹುಸೂರಿನ ಹೆಗ್ಗೆರೆ ಕೆರೆಗೆ ಬಾಗಿನ ಅರ್ಪಿಸಿ ನಾಮಫಲಕ ಅನಾವರಣಗೊಳಿಸಿದ್ರು. ಬಳಿಕ ಮಾತನಾಡಿದ ಭೀಮಣ್ಣ ನಾಯ್ಕ, ಸರ್ಕಾರ ಒಂದನ್ನು ಅವಲಂಭಿಸದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಿಂದ ಹುಸೂರಿನ ಜನ ಮಾಡಿರುವ ಕಾರ್ಯ ಇತರರಿಗೆ ಪ್ರೇರಣೆಯಾಗಿದೆ. ಹಸಿರುಕ್ರಾಂತಿಗೆ ಶಕ್ತಿ ನೀಡಬೇಕಾದರೆ ಕೆರೆಗಳ ಪುನಶ್ಚೇತನವಾಗಬೇಕು, ಹುಸೂರಿನ ಜನತೆಯ ಕೆರೆ ಪುನಶ್ಚೇತನ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು..

ಇನ್ನು ಹುಸೂರಿನ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಡೊಳ್ಳು ಕುಣಿತ ಹಾಗೂ ಇತರರ ವಾದ್ಯಗಳೊಂದಿಗೆ ನೂರಾರು ಮಹಿಳೆಯರು ಕುಂಬಮೇಳದೊಂದಿಗೆ ಕೆರೆಗೆ ಭಾಗಿನ ಅರ್ಪಿಸಿದ್ರು. ಈ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಹಾಗೂ ಕೆರೆ ಅಭಿವೃದ್ಧಿ ಅಧ್ಯಕ್ಷ ನಾರಾಯಣ ನಾಯ್ಕ, ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು…

ದಿವಾಕರ ನಾಯ್ಕ ನುಡಿಸಿರಿ, ನ್ಯೂಸ್‌ ಸಿದ್ದಾಪುರ