ದಾಂಡೇಲಿ ನವಗ್ರಾಮದಿಂದ ಅವಿವಾಹಿತ ಯುವಕ ನಾಪತ್ತೆ : ದೂರು ದಾಖಲು

ದಾಂಡೇಲಿ:- ರಜೆಯಲ್ಲಿ ಮನೆಗೆ ಬಂದಿದ್ದ ಯುವಕನೋರ್ವನು ಮರಳಿ ಗೋವಾಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವನು ನಾಪತ್ತೆಯಾಗಿರುವ ಘಟನೆ ದಾಂಡೇಲಿ ನವಗ್ರಾಮದಲ್ಲಿ ನಡೆದಿದೆ. ನವಗ್ರಾಮ ಗಾಂವಠಾಣ ನಿವಾಸಿ ಆಕಾಶ್ ಚಂದ್ರಕಾಂತ ನಾಯ್ಕ ಎಂಬಾತನೇ ನಾಪತ್ತೆಯಾದ ಯುವಕನಾಗಿದ್ದಾನೆ. ಈತ ಗೋವಾದಲ್ಲಿರುವ ಸ್ವಿಂಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ.

ಈತ ಸೆಪ್ಟೆಂಬರ್ 13ರಂದು ಗೋವಾದಿಂದ ನವಗ್ರಾಮದಲ್ಲಿರುವ ತನ್ನ ಮನೆಗೆ ಬಂದು ಉಳಿದು ಮರುದಿನ ಬೆಳಿಗ್ಗೆ ಮರಳಿ ಗೋವಾಕ್ಕೆ ಹೋಗಿದ್ದ. ಗೋವಾಕ್ಕೆ ಹೋದ ನಂತರ ಈತನು ಮನೆಯವರಿಗೆ ಮೊಬೈಲ್ ಸಂಪರ್ಕ ಮಾಡಿರಲಿಲ್ಲ. ಕಾರಣ ಈತ ತನ್ನ ಮೊಬೈಲ್ ಕಳ್ಳತನವಾಗಿರುವುದೆಂದು ಹೇಳಿದ್ದ. ಮಗ ಮರಳಿ ಮನೆಗೆ ಬರದೇ ಇರುವುದರಿಂದ ಹಾಗೂ ಸಂಪರ್ಕಕ್ಕೆ ಸಿಗದೇ ಇರುವ ಹಿನ್ನೆಲೆಯಲ್ಲಿ ಆತನ ತಂದೆ ಚಂದ್ರಕಾಂತ್ ನಾಯ್ಕ ಗೋವಾಕ್ಕೆ ತೆರಳಿ, ಅವರ ಸಂಬಂಧಿಕರ ಮನೆಯಲ್ಲಿ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ವಿಚಾರಿಸಿದ್ರೂ ಮಗನ ಪತ್ತೆಯಾಗಲಿಲ್ಲ.

ಈ ಕುರಿತು ತಂದೆ ಚಂದ್ರಕಾಂತ ನಾಯ್ಕ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ದೂರು ಸ್ವೀಕರಿಸಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ..

ಸಂದೇಶ್‌ ಜೈನ್‌, ನುಡಿಸಿರಿ ನ್ಯೂಸ್‌, ದಾಂಡೇಲಿ..