ಬೃಹತ್‌ ಹೊಂಡಗಳಿಂದಾವೃತವಾದ ಶಿರಸಿ-ಸಿದ್ದಾಪುರ ಮುಖ್ಯ ರಸ್ತೆ. ವಾಹನ ಸಂಚಾರಕ್ಕೆ ತೀವ್ರವಾದ ಅಡಚಣೆ.

ಸಿದ್ದಾಪುರ : ಸಿರ್ಸಿ ಸಿದ್ದಾಪುರ ಮುಖ್ಯ ರಸ್ತೆಯ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ಉಂಟಾಗಿದ್ದು ವಾಹನ ಸವಾರರಿಗೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೊಂಡ ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ನಾಡ ದೇವಿ ಹೋರಾಟ ವೇದಿಕೆಯ ಅನಿಲ್ ಕೊಠಾರಿ ಒತ್ತಾಯ ಮಾಡಿದ್ದಾರೆ. ಈ ರಸ್ತೆಯಲ್ಲಿ ಅತಿಹೆಚ್ಚಿನ ವಾಹನಗಳು ಓಡಾಡುತ್ತವೆ ಅಲ್ಲದೇ ಕೊಂಡಗಳು ಉಂಟಾಗಿರುವುದರಿಂದ ಕೊಂಡ ತಪ್ಪಿಸಲು ವಾಹನ ಸವಾರು ಬಲಬದಿಗೆ ಬಂದು ಎದುರಿನಿಂದ ಬರುತ್ತಿರುವ ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತವಾಗುವಂತಹ ಲಕ್ಷಣಗಳಿದ್ದು ಅಪಾಯಗಳಾಗುವ ಮೊದಲು ಸೂಕ್ತ ರೀತಿ ಸುರಕ್ಷತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.