‘ಮೇರಾ ಮಾಟಿ,ಮೇರಾ ದೇಶ್’ ಅಭಿಯಾನದ ಪ್ರಯುಕ್ತ ಹೊನ್ನಾವರ ಬಿಜೆಪಿ ಮಂಡಲದಿಂದ ಪೂರ್ವಭಾವಿ ಸಭೆ

ಹೊನ್ನಾವರ: ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ‘ಮೇರಾ ಮಾಟಿ,ಮೇರಾ ದೇಶ್’ ಅಭಿಯಾನದ ಪ್ರಯುಕ್ತ ಹೊನ್ನಾವರ ಬಿಜೆಪಿ ಮಂಡಲದಿಂದ ಪೂರ್ವಭಾವಿ ಸಭೆ ನಡೆಯಿತು.

ಈ ಅಭಿಯಾನದ ಮಾಹಿತಿಯನ್ನು ವಿಭಾಗ ಸಹಪ್ರಭಾರಿ ಎನ್.ಎಸ್ ಹೆಗಡೆ ನೀಡಿದರು.ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಿಸಲಾಗುತ್ತಿರುವ ಅಮೃತ ವನದಲ್ಲಿ ದೇಶದ ಪ್ರಮುಖ ಭಾಗಗಳಿಂದ ಮಣ್ಣನ್ನು ಸಂಗ್ರಹಿಸಿ ಅಮೃತ ವನದಲ್ಲಿ ಸೇರಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ.ಗಣಪತಿ ನಾಯ್ಕ ಬಿಟಿ ಈ ಅಭಿಯಾನದ ಸಂಚಾಲಕರಾಗಿದ್ದಾರೆ.ಬಿಜೆಪಿ ಮಂಡಲಾಧ್ಯಕ್ಷ ರಾಜೇಶ್ ಭಂಡಾರಿ ಸಭಾದ್ಯಕ್ಷತೆ ವಹಿಸಿದ್ದರು. ಪ್ರದಾನ ಕಾರ್ಯದರ್ಶಿಗಳಾದ ಮಂಜುನಾಥ ನಾಯ್ಕ,ಸುರೇಶ್ ಹರಿಕಂತ್ರ, ಗಣೇಶ್ ಪೈ,ಎಮ್.ಎಸ್ ಹೆಗಡೆ,ಲೊಕೇಶ್ ಮೇಸ್ತ,ಪ್ರೇಮಾ ನಾಯ್ಕ,ಸುಬ್ರಹ್ಮಣ್ಯ ಭಟ್,ಹರಿಶ್ಚಂದ್ರ ನಾಯ್ಕ ಮುಂತಾದವರಿದ್ದರು.