ಹಳಿಯಾಳ ತಾಲ್ಲೂಕಿನಲ್ಲಿ ಶೌರ್ಯ ಜಾಗರಣ ರಥಯಾತ್ರೆ ಯಶಸ್ವಿ : ಶ್ರೀಪತಿ ಭಟ್

ಹಳಿಯಾಳ : ಹಿಂದೂ ಧರ್ಮ ಸಂಸ್ಥಾಪನೆ ಹಾಗೂ ಹಿಂದೂ ಧರ್ಮ ಬಾಂಧವರ ಸಂಘಟನೆಗಾಗಿ ಆಯೋಜಿಸಲಾಗಿದ್ದ ಶೌರ್ಯ ಜಾಗರಣ ರಥಯಾತ್ರೆಯು ಹಳಿಯಾಳ ತಾಲೂಕಿನಲ್ಲಿ ಸಂಭ್ರಮ ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿದೆ ಎಂದು ಹಳಿಯಾಳ ತಾಲೂಕಿನ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಶ್ರೀಪತಿ ಭಟ್ ಅವರು ಹೇಳಿದ್ದಾರೆ.

ತಾಲೂಕಿನ ಬಹುತೇಕ ಪ್ರದೇಶಗಳ ಮುಖ್ಯರಸ್ತೆಗಳಲ್ಲಿ ಹಾದುಹೋದ ಶೌರ್ಯ ಜಾಗರಣ ರಥಯಾತ್ರೆಯ ಭವ್ಯ ಮೆರವಣಿಗೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಹಿಂದೂ ಪರ ಸಂಘಟನೆಯ ಮುಖಂಡರು, ಕಾರ್ಯಕರ್ತರು, ಹಿಂದೂ ಧರ್ಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಪನ್ನಗೊಳಿಸುವುದರ ಜೊತೆಗೆ ಅರ್ಥಪೂರ್ಣವನ್ನಾಗಿಸಲು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಶ್ರೀಪತಿ ಭಟ್ ಅವರು ತಿಳಿಸಿದ್ದಾರೆ.