ಹಿರಿಯರಿಗೆ ಗೌರವ ನೀಡಿದರೆ ನಾವು ಸಮಾಜದಲ್ಲಿ ಸತ್ಪ್ರಜೆಗಳಾಗಲು ಸಾಧ್ಯ-ಶಾಸಕ ಭೀಮಣ್ಣ ನಾಯ್ಕ.

ಸಿದ್ದಾಪುರ : ಹಿರಿಯರ ಅನುಭವದ ಮಾತುಗಳನ್ನು ಪಾಲಿಸಬೇಕು ಮತ್ತು ಹಿರಿಯರಿಗೆ ಗೌರವ ನೀಡಿದರೆ ನಾವು ಸಮಾಜದಲ್ಲಿ ಸತ್ಪ್ರಜೆಗಳಾಗಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ್ ಹೇಳಿದರು ಅವರು ಪಟ್ಟಣದ ಬಾಲ ಭವನದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದವರು ಆಯೋಜಿಸಿದ್ದ ಹಿರಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯರನ್ನ ಸನ್ಮಾನಿಸಿ ಗೌರವವನ್ನು ಸಮರ್ಪಿಸಿ ಮಾತನಾಡಿದರು. ಹಿರಿಯರನ್ನು ಪೂಜ್ಯ ಭಾವನೆಯಲ್ಲಿ ಕಾಣಬೇಕು ಅವರಿಂದ ಜೀವನ ಅನುಭವ ಹಾಗೂ ಮಾರ್ಗದರ್ಶನಗಳನ್ನು ಪಡೆದುಕೊಂಡು ಉತ್ತಮ ಜೀವನವನ್ನು ನಡೆಸಬೇಕು, ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು ಎಂದು ಹೇಳಿದರು.