ರೈಲ್ವೆ ಟನೇಲ್ ಸಮೀಪ ರೈಲು ಬಡಿದು ವ್ಯಕ್ತಿಯೊರ್ವ ಸಾವು

ಹೊನ್ನಾವರ: ಮೃತಪಟ್ಟ ವ್ಯಕ್ತಿ ಹುಡಗೋಡದ ಧರ್ಮ ಶಂಭು ನಾಯ್ಕ(52) ಎಂದು ಗುರುತಿಸಲಾಗಿದೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಇವರು ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಶನಿವಾರ ಮಧ್ಯಾಹ್ನ ಹೋಗಿದ್ದರು. ರೈಲ್ವೆ ಹಳಿಯ ಮೇಲೆ ರುಂಡ ಮುಂಡ ಬೆರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯ ಮರಣೊತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಶವ ಹಸ್ತಾಂತರಿಸಿದ್ದು, ಈ ಸಂಭಂದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ