ಭಟ್ಕಳ  ಅಗ್ನಿಶಾಮಕ ಅಧಿಕಾರಿ ಎಸ್. ರಮೇಶಗೆ ಮುಖ್ಯಮಂತ್ರಿ ಪದಕ ಪ್ರಧಾನ

ಭಟ್ಕಳ: ಅಗ್ನಿಶಾಮಕರಾಗಿ ಸೇವೆಗೆ ಸೇರಿ ಸುಧೀರ್ಘ 31 ವರ್ಷಗಳ ತಮ್ಮ ಸೇವೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಸ್ತುತ ಭಟ್ಕಳ ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಅಧಿಕಾರಿಯಾಗಿರುವ ಎಸ್‌. ರಮೇಶ ಅವರಿಗೆ 2023ನೇ ಸಾಲಿನ ಮುಖ್ಯ ಮಂತ್ರಿಗಳ ಪದಕ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್.ಎ. ಮಂಡೂರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಪದಕವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಪ್ರದಾನ ಮಾಡಿದರು.

ಎಸ್. ರಮೇಶ ಅವರು ತಮ್ಮ ಸೇವಾ ಅವಧಿಯಲ್ಲಿ ಅಗ್ನಿ ಕರೆ, ರಕ್ಷಣಾ ಕರೆ, ಭೂ ಕುಸಿತ, ನೆರೆಹಾವಳಿ, ರಸ್ತೆ ಅಪಘಾತ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಕಾಡುಪ್ರಾಣಿಗಳು, ಜಾನುವಾರುಗಳ ರಕ್ಷಣೆ, ಗ್ಯಾಸ್ ಸೋರಿಕೆ ಸೇರಿದಂತೆ ಎಲ್ಲ ರೀತಿಯ ಕಠಿಣ ಕಾರ್ಯಗಳನ್ನು ಮಾಡಿ ಕರಗತ ಮಾಡಿಕೊಂಡಿದ್ದಲ್ಲದೇ ತಮ್ಮ ಸೇವಾ ಅವಧಿಯಲ್ಲಿ ಶಾಲಾ ಕಾಲೇಜುಗಳಲ್ಲಿ ಹೋಗಿ ವಿದ್ಯಾರ್ಥಿಗಳಿಗೆ ಅಗ್ನಿ ಅವಘಡಗಳ ಕುರಿತು, ಗ್ಯಾಸ್ ಸೋರಿಕೆಯ ಕುರಿತು ಹಾಗೂ ಅವುಗಳನ್ನು ತಡೆಗಟ್ಟುವ ಕುರಿತು ಪ್ರಾತ್ಯಕ್ಷಿಕೆ ನೀಡಿ ಮನೆ ಮಾತಾಗಿದ್ದಾರೆ. ಇವರ ಸೇವೆಗೆ ಮುಖ್ಯ ಮಂತ್ರಿಗಳ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದನ್ನು ಗುರುತಿಸಿ ಈಗಾಗಲೇ ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು