ದಾಂಡೇಲಿಯ ಗಾಂಧಿನಗರದಲ್ಲಿ ನಾಪತ್ತೆಯಾಗಿದ್ದ ಬಾಲಕ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ

ದಾಂಡೇಲಿ : ಗಾಂಧಿನಗರದಲ್ಲಿ ಗುರುವಾರ ಸಂಜೆ ಡಿಜೆ ಸೌಂಡ ನೋಡಲು ಹೋಗಿ ನಾಪತ್ತೆಯಾಗಿದ್ದ ಬಾಲಕ, ನಿರ್ಮಾಣ ಹಂತದ ಮನೆಯ ನೀರಿನ ಟ್ಯಾಂಕಿನಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.
ದಾಂಡೇಲಿಯ ಗಾಂಧಿನಗರದಲ್ಲಿ ಗುರುವಾರ ಸಂಜೆ ಡಿಜೆ ಸೌಂಡ ನೋಡಲು ಹೋಗಿ ನಾಪತ್ತೆಯಾಗಿದ್ದ ಬಾಲಕ, ನಿರ್ಮಾಣ ಹಂತದ ಮನೆಯ ನೀರಿನ ಟ್ಯಾಂಕಿನಲ್ಲಿ ಶವವಾಗಿ ಪತ್ತೆಯಾಗಿದ್ದು ಬಾಲಕನ ಹೆತ್ತವರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ…
ಗಾಂಧಿನಗರದ ನಿವಾಸಿ ಸುನೀಲ್ ಕಂಜಾರಬಾಟ್ ಎಂಬವರ 6 ವರ್ಷದ ಮಗ ಯಶ್ ಎಂಬವನೇ ಮೃತಪಟ್ಟ ಪುಟಾಣಿ ಬಾಲಕ. ಗುರುವಾರ ಸಂಜೆ ಡಿಜೆ ಸೌಂಡ್ ಬರುತ್ತಿರುವುದನ್ನು ನೋಡಲೆಂದು ಹೋದವನು ನಾಪತ್ತೆಯಾಗಿದ್ದ. ಎಷ್ಟೇ ಹುಡುಕಾಡಿದರೂ ಸಿಗದಿದ್ದಾಗ, ಸ್ಥಳೀಯ ನಗರ ಸಭಾ ಸದಸ್ಯೆ ರುಕ್ಮಿಣಿ ಬಾಗಾಡೆಯವರ, ನಿರ್ಮಾಣದ ಹಂತದಲ್ಲಿರುವ ಮನೆಯ ನೀರಿನ ಟ್ಯಾಂಕಿನಲ್ಲಿ ಬಾಲಕನ ಮೃತದೇಹ ಪತ್ತಯಾಗಿದೆ.
ನೀರಿನ ಟ್ಯಾಂಕಿನ ಮೇಲ್ಗಡೆ ಪ್ಲೈವುಡ್ ಮುಚ್ಚಿದ್ದು, ಅದನ್ನು ತೆಗೆದು ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಬಾಲಕ ಆಕಸ್ಮಿಕವಾಗಿ ನೀರಿನ ಟ್ಯಾಂಕಿಗೆ ಬಿದ್ದಿದ್ರೆ ಟ್ಯಾಂಕಿನ ಮೇಲ್ಗಡೆ ಮುಚ್ಚಲಾಗಿದ್ದ ಪ್ಲೈವುಡ್ ಶೀಟ್ ಮುಚ್ಚಿಯೆ ಇರುವುದರಿಂದ ಬಾಲಕನ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸ್ ತನಿಖೆಯಿಂದ ನಿಜಾಂಶ ಬೆಳಕಿಗೆ ಬರಬೇಕಾಗಿದೆ. ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿದ್ರೆ, ಹೆತ್ತ ಮಗುವನ್ನು ಕೆಳದುಕೊಂಡ ಹೆತ್ತವರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ದಾಂಡೇಲಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..