ಗಮನ ಸೆಳೆದ ದೇಶಪಾಂಡೆಯವರ ನೃತ್ಯ

ದಾಂಡೇಲಿ : ಅವರು ಯುವಕರನ್ನು ನಾಚಿಸುವಂತಹ 75 ವರ್ಷ ದಾಟಿದ ಕ್ರಿಯಾಶೀಲ ರಾಜಕಾರಣಿ. ಕ್ಷೇತ್ರದ ಬಗ್ಗೆ ಸದಾ ಮಿಡಿತ, ಏನಾದರೂ ಹೊಸತನಗಳನ್ನು ಅನುಷ್ಟಾನ ಮಾಡಬೇಕೆಂಬ ತುಡಿತ. ಹಾಗಾಗಿಯೆ ರಾಜ್ಯದಲ್ಲೆ ಅತೀ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ. ಅಂದ ಹಾಗೆ ನಾವು ಹೇಳಲು ಹೊರಟಿರುವುದು ರಾಜ್ಯ ಕಂಡ ಅಪರೂಪದ ಅಪೂರ್ವ ವ್ಯಕ್ತಿತ್ವದ ಬೆಳ್ಳಿ ಕೂದಲಿನ ಸುಂದರ ಕಾಂತಿಯ ಹೊಳಪು ಮುಖದ ಚೆಲುವ ಚೆನ್ನಿಗ ಆರ್.ವಿ.ದೇಶಪಾಂಡೆಯವರ ಬಗ್ಗೆ ಎನ್ನುವುದನ್ನು ಹೆಚ್ಚು ವಿವರಿಸುವ ಅಗತ್ಯವಿಲ್ಲ ಎನ್ನಿ.

ಇಂದು ಗೃಹಲಕ್ಷ್ಮೀ ಯೋಜನೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಂದಿದ್ದ ಆರ್.ವಿ.ದೇಶಪಾಂಡೆಯವರನ್ನು ಕಾರ್ಯಕ್ರಮ ನಡೆಯುವ ಕಾರ್ಮಿಕ ಭವನದ ಮುಂದೆ ಸೋಮಾನಿ ವೃತ್ತದಿಂದ ಭವ್ಯ ಮನೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯ್ತು. ಮೆರವಣಿಗೆಯಲ್ಲಿ ಸಿದ್ದಿ ಕಲಾ ತಂಡದವರ ನೃತ್ಯ ಗಮನ ಸೆಳೆಯಿತು. ಇದನ್ನು ಗಮನಿಸಿದ ಆರ್.ವಿ.ದೇಶಪಾಂಡೆಯವರು ಸಿದ್ದಿ ಕಲಾ ತಂಡದವರ ನೃತ್ಯಕ್ಕೆ ಅವರ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದರು.