ಸಿದ್ದಾಪುರ ಪೋಲಿಸ್‌ ಠಾಣೆಯಲ್ಲಿ ವಿದ್ಯಾರ್ಥಿಗಳಿಗಾಗಿ ತೆರದ ಮನೆ ಕಾರ್ಯಕ್ರಮ

ಸಿದ್ದಾಪುರ ಪೋಲಿಸ್‌ ಠಾಣೆಯಲ್ಲಿ ಗುರುವಾರ ವಿದ್ಯಾರ್ಥಿಗಳಿಗಾಗಿ ಪೋಲಿಸ್‌ ಠಾಣೆಯ ಬಗ್ಗೆ ಮಾಹಿತಿಯ ತೆರದ ಮನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿದ್ದಾಪುರ ಪೋಲಿಸ್‌ ಗುರುವಾರ ಠಾಣೆಯಲ್ಲಿ ಪ್ರತಿ ತಿಂಗಳಿನಂತೆ ಈ ಬಾರಿಯೂ ಕೂಡ ವಿದ್ಯಾರ್ಥಿಗಳಿಗಾಗಿ ಪೋಲಿಸ್‌ ಠಾಣೆಯ ಬಗ್ಗೆ ಮಾಹಿತಿಯ ತೆರದ ಮನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ತಿಂಗಳ ಕಾರ್ಯಕ್ರಮದಲ್ಲಿ ಜಗದ್ಗುರು ಮುರುಗರಾಜೇಂದ್ರ ಅಂಧ ಮಕ್ಕಳ ಶಾಲೆ ಹಾಳದಕಟ್ಟಾ ಮಕ್ಕಳು ಭಾಗವಹಿಸಿದ್ರು. ಠಾಣೆಯ ಇನ್ಸ್ಪೆಕ್ಟರ್ ಕುಮಾರ್.ಕೆ ಅವರ ಉಪಸ್ಥಿತಿಯಲ್ಲಿ ಮಾಹಿತಿ ನೀಡಲಾಯ್ತು
ಪಿಎಸ್ಐ ಅನಿಲ್ , ಮಹಿಳಾ ಪಿಎಸ್ಐ ಗೀತಾ ಸಿರ್ಸಿಕರ್ ವಿದ್ಯಾರ್ಥಿಗಳ ಪರಿಚಯ ಪಡೆದು ಠಾಣೆಯ ಅಧಿಕಾರಿಗಳ ಮಾಹಿತಿ ಹಾಗೂ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದ್ರು. ಪ್ರಕರಣ ದಾಖಲಿಸುವುದು ಹೇಗೆ, ಸಮಸ್ಯೆಗಳು ಎದುರಾದಾಗ ಹೇಗೆ ಮಾಹಿತಿ ನೀಡುವುದು 112 ಗೆ ಕರೆ ಮಾಡುವುದು ಹಾಗೂ ಮುಂತಾದ ಹಲವಾರು ವಿಷಯದ ಕುರಿತು ಸಂಪೂರ್ಣ ಮಾಹಿತಿ ನೀಡಿದ್ರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಠಾಣೆ ಸಿಬ್ಬಂದಿಗಳು ಉಪಸ್ಥಿತರಿದ್ರು..