ಜಿಲ್ಲಾ ಯುವ ಒಕ್ಕೂಟದ ನೂತನ ಅಧ್ಯಕ್ಷರಾಗಿ ದಿನಕರ ಹೆಬ್ಬಾರ ಆಯ್ಕೆ

ಅಂಕೋಲಾ : ಜಿಲ್ಲಾ ಯುವ ಒಕ್ಕೂಟ ನೂತನ ಅಧ್ಯಕ್ಷರಾಗಿ ಕ್ರೀಯಾಶೀಲ ವ್ಯಕ್ತಿತ್ವದ ಅಂಕೋಲಾದ ದಿನಕರ ಶಿವರಾಮ ಹೆಬ್ಬಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕಾರವಾರದ ದಿಲೀಪ ಪಾಂಡುರ0ಗ ಕೋಠಾರಕರ ಆಯ್ಕೆಗೊಂಡಿದ್ದಾರೆ.

ಉಪಾದ್ಯಕ್ಷರಾಗಿ ಮುಂಡಗೋಡದ ಮಾಲತೇಶ ಲಿಂಗಪ್ಪ ಜಾಡರ, ಸಿದ್ದಾಪುರದ ಅಣ್ಣಪ್ಪ ನಾರಾಯಣ ನಾಯ್ಕ, ಖಜಾಂಚಿಯಾಗಿ ಶಂಕರಮೂರ್ತಿ ನಾರಾಯಣ ನಾಯ್ಕ ಸಿದ್ದಾಪುರ, ಸಂಘಟನಾ ಕಾರ್ಯದರ್ಶಿಯಾಗಿ ಅಂಕೋಲಾದ ಗೋಪಾಲ ನಾಯಕ. ಅಡ್ಲೂರು, ಗೌರವ ಪತ್ರಿಕಾ ಸಲಹೆಗಾರರಾಗಿ ರಾಘು ಕಾಕರಮಠ. ಅಂಕೋಲಾ, ಜಿಲ್ಲಾ ಪತ್ರಿಕಾ ಕಾರ್ಯದರ್ಶಿಯಾಗಿ ವಿನಾಯಕ ಪಾಂಡು ಮೇಸ್ತ ಹೊನ್ನಾವರ, ಕ್ರೀಡಾ ಕಾರ್ಯದರ್ಶಿಯಾಗಿ ರಾಘವೇಂದ್ರ ರತ್ನಾಕರ ಮೇಸ್ತ. ಹೊನ್ನಾವರ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಲೋಕ ನರಸಿಂಹ ಕಡವಾಡಕರ ಕಾರವಾರ, ಮಂಜುನಾಥ ವಿವೇಕಾನಂದ ನಾಯ್ಕ. ಅಂಕೋಲಾ, ರಾಘವೇಂದ್ರ ಲಿಂಗಪ್ಪ ಕೂಸುರು. ಮುಂಡಗೋಡ, ರಾಜೇಶ ನಾಗಪ್ಪ ನಾಯ್ಕ. ಭಟ್ಕಳ, ವಿನಾಯಕ ಭಾಸ್ಕರ ನಾಯ್ಕ. ಹೊನ್ನಾವರ ಅವರು ನೇಮಕಗೊಂಡಿದ್ದಾರೆ.

ಹೊನ್ನಾವರದಲ್ಲಿ ನಡೆದ ಜಿಲ್ಲಾ ಒಕ್ಕೂಟದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.