ಚಿತ್ರಗಿ ಶಾಲೆಯ ನೂತನ ಕೊಠಡಿಯನ್ನು ಉದ್ಘಾಟಿಸಿದ ದಿನಕರ ಶೆಟ್ಟಿ

ಕುಮಟಾ : ತಾಲೂಕಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಗಿ ಇದರ ನೂತನ ವಿವೇಕ ಕೊಠಡಿಯನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯವರು ಉದ್ಘಾಟನೆ ಮಾಡಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ವರ್ಗಕೋಣೆ ಇದಾಗಿದ್ದು, ದಿನಕರ ಶೆಟ್ಟಿಯವರೇ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದರು. ಶಾಸಕರ ಬೇಡಿಕೆಯಂತೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಕುಮಟಾ ತಾಲೂಕಿಗೆ ವಿವೇಕ ಶಾಲೆ ಯೋಜನೆಯಡಿಯಲ್ಲಿ ಒಟ್ಟು 27 ಹೊಸ ವರ್ಗಕೋಣೆಗಳನ್ನು ಮಂಜೂರು ಮಾಡಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಲ್. ಭಟ್, ಪುರಸಭಾ ಸದಸ್ಯರಾದ ಸಂತೋಷ ನಾಯ್ಕ್, ಸುಮತಿ ಭಟ್ ಹಾಗೂ ಅಭಿ ಚಂದ್ರಹಾಸ ನಾಯ್ಕ್, ಜಿ. ಪಂ. ಅಭಿಯಂತರ ಸಂಜೀವ ನಾಯಕ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್. ಬಿ. ನಾಯ್ಕ್, SDMC ಅಧ್ಯಕ್ಷ ರಾಘವೇಂದ್ರ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ್ ಪಟಗಾರ, ಮುಖ್ಯ ಶಿಕ್ಷಕ ಪಾಂಡುರಂಗ ಹುಲಸ್ವಾರ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.