ಸಿದ್ದಾಪುರ: ಅಭಿವೃದ್ಧಿಯ ವಿಷಯದಲ್ಲಿ ಯಾರೂ ಕೂಡ ತೊಂದರೆ ಮಾಡಬಾರದು ನಾಲ್ಕು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಡೆದುಕೊಳ್ಳಬೇಕು-ಸಚಿವ ಮಾಂಕಾಳ ವೈದ್ಯ

ಸಿದ್ದಾಪುರ: ಅಭಿವೃದ್ಧಿಯ ವಿಷಯದಲ್ಲಿ ಯಾರೂ ಕೂಡ ತೊಂದರೆ ಮಾಡಬಾರದು ನಾಲ್ಕು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ವೈದ್ಯ ಹೇಳಿದರು ಅವರು ವಂದಾನೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಹೇಳಿದರು ಅಭಿವೃದ್ಧಿ ವಿಷಯಕ್ಕೆ ಜನ ತೊಂದರೆ ನೀಡಿದರೆ ಕಷ್ಟ ಆಗುತ್ತದೆ ಕೊಡಿಗದ್ದೆ ಹೊನ್ನಾವರ ಸಂಪರ್ಕ ರಸ್ತೆ ಅಭಿವೃದ್ಧಿ ಗೆ ಹಣ ಮಿಸಲಿಟ್ಟಿದ್ದೇವೆ ಆದರೆ ವಿಷಯ ಕೋರ್ಟ್ ನಲ್ಲಿದೆ ಬಗೆಹರಿದ ನಂತರ ರಸ್ತೆಯನ್ನು ಸಂಪೂರ್ಣ ಮಾಡಲಾಗುವುದು ಎಂದರು. ಜಿಲ್ಲೆಯ ರಸ್ತೆಗಳು ಸಂಪೂರ್ಣ ಹಾಳಾಗಿವೆ ಹಿಂದಿನ ಸರ್ಕಾರದ ಅವಧಿಯಲ್ಲಿ ಇದನ್ನು ಮಾಡಬಹುದಿತ್ತು ನಾವು ಈಗಷ್ಟೇ ಅಧಿಕಾರಕ್ಕೆ ಬಂದಿದ್ದೇವೆ ಹಂತ ಹಂತವಾಗಿ ರಸ್ತೆಯನ್ನು ಸಂಪೂರ್ಣ ಮಾಡಲಾಗುವುದು ಎಂದರು. ಇನ್ನು ಜಿಲ್ಲೆಯಲ್ಲಿ ಬರ ತಾಂಡವ ಆಡುತ್ತಿದ್ದು ಇಡೀ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಅಂತ ಘೋಷಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಜಿಲ್ಲೆಯ ಹೊನ್ನಾವರ ಹಾಗೂ ಜೋವಿಡಾ ತಾಲೂಕುಗಳು ಮಾತ್ರ ಇದರಿಂದ ಹೊರತಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ಕೂಡ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು. ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವಂತೆ ಇಲ್ಲಿನ ಜನರ ಕೂಗಿನ ಬಗ್ಗೆ ಕೇಳಿದ ಪ್ರಶೆಗೆ ಜಿಲ್ಲೆ ಎರಡಾಗದಿದ್ದರೂ ಜನಕ್ಕೆ ಅನುಕೂಲವಾಗುವ ರೀತಿಯಲ್ಲಿ ಸ್ಪಂದಿಸುತ್ತೇವೆ ಎಂದರು.