ಕೆಟ್ಟಿರುವ ರಸ್ತೆ ವೀಕ್ಷಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ: ಪಟ್ಟಣದ ಸುಭಾಷ್ ರಸ್ತೆ ಮಳೆಯಿಂದ ಕೆಟ್ಟಿದ್ದು, ಶಾಸಕ ದಿನಕರ ಶೆಟ್ಟಿ ಅವರು ಇಂದು ಅಧಿಕಾರಿಗಳೊಂದಿಗೆ ತೆರಳಿ ವೀಕ್ಷಣೆ ಮಾಡಿದರು. ರಸ್ತೆಯನ್ನು ಸರಿಪಡಿಸಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಲು ಹಾಗೂ ವಾಹನ ದಟ್ಟಣೆಯನ್ನು ನಿರ್ವಹಿಸಲು ಇರುವ ಮಾರ್ಗೋಪಾಯಗಳ ಬಗ್ಗೆ ಅಧಿಕಾರಿಗಳೊಡನೆ ಸಮಾಲೋಚಿಸಿದರು.

ಪುರಸಭಾ ಚೇರಮನ್ ಕಿರಣ ಅಂಬಿಗ, ಮುಖ್ಯ ಅಧಿಕಾರಿ ವಿದ್ಯಾಧರ ಕಲಾದಗಿ, ಅಭಿಯಂತರ ಉಮೇಶ ಮಡಿವಾಳ, ಪ್ರಮುಖರಾದ ರಾಮಚಂದ್ರ ಪಟಗಾರ, ಕೇಶವ ಮಡಿವಾಳ, ವೆಂಕಟೇಶ ನಾಯ್ಕ್ ಈ ಸಂದರ್ಭದಲ್ಲಿ ಇದ್ದರು.