ಗೋಕರ್ಣದಲ್ಲಿ ಮೊದಲ ಶ್ರಾವಣ ಸೋಮವಾರದ ಪೂಜೆ ಸಂಪನ್ನ

ಗೋಕರ್ಣ: ಪುರಾಣ ಪ್ರಸಿದ್ದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರಾವಣ ಮೊದಲ ಸೋಮವಾರದ ವಿಶೇಷ ಪೂಜೆ ನೆರವೇರಿತು. ಏಕಾದಶ ರುದ್ರಾಭಿಷೇಕ, ಸುವರ್ಣ ಶಂಖ ಗಂಗಾಜಲಾಭಿಷೇಕ, ರತ್ನಖಚಿತ ಸುವರ್ಣ ಅಲಂಕಾರ, ಸುವರ್ಣ ನಾಗಾಭರಣ ಶೃಂಗಾರ ಹಾಗೂ ಪಂಚಭಕ್ಷ ನೈವೇದ್ಯಗಳೊಂದಿಗೆ ವಿಶೇಷ ಕಟ್ಲೇ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

ಅರ್ಚಕ ವೇ. ಅಮೃತೇಶ ಭಟ್ ಹಿರೇಯವರ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆಯಿತು. ಜಗದ ಒಳಿತಿಗಾಗಿ ಮಹಾಬಲೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಆಗಮಿಸಿದ ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.