ಹಳೆದಾಂಡೇಲಿ ಬಸ್ ನಿಲ್ದಾಣಕ್ಕೆ ಎಲ್ಲಾ ಬಸ್’ಗಳು ಬರುವಂತೆ ವಿಷ್ಣು ಕಾಮತ್ ಮನವಿ

ದಾಂಡೇಲಿ : ಹಳೆದಾಂಡೇಲಿ ಬಸ್ ನಿಲ್ದಾಣಕ್ಕೆ ಬಹಳಷ್ಟು ವರ್ಷಗಳ ಇತಿಹಾಸವಿದ್ದು, ದಾಂಡೇಲಿಯ ಮೊದಲ ಬಸ್ ನಿಲ್ದಾಣವು ಆಗಿದೆ. ಹಳೆದಾಂಡೇಲಿಯ ಬಸ್ ನಿಲ್ದಾಣಕ್ಕೆ ಇತ್ತೀಚಿನ ಕೆಲ ತಿಂಗಳುಗಳಿಂದ ಬಸ್’ಗಳು ಬರುವುದನ್ನು ಸ್ಥಗಿತಗೊಳಿಸಿವೆ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ಹಳೆದಾಂಡೇಲಿಗೆ ಎಲ್ಲಾ ಬಸ್ ಗಳು ಬರುವಂತೆ ಅಗತ್ಯ ಕ್ರಮವನ್ನು ಸಾರಿಗೆ ಇಲಾಖೆಯವರು ಕೈಗೊಳ್ಳಬೇಕೆಂದು ನಗರದ ಹಿರಿಯ ಹೋರಾಟಗಾರರಾದ ವಿಷ್ಣು ಕಾಮತ್ ಅವರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

ಒಂದು ತಿಂಗಳೊಳಗೆ ಮನವಿಗೆ ಸ್ಪಂದಿಸದಿದ್ದಲ್ಲಿ ನವಂಬರ್ ಮೊದಲ ವಾರದಲ್ಲಿ ನಗರದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ವಿಷ್ಣು ಕಾಮತ್ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.