ಶ್ರೀ ನಾರಾಯಣ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶಾಸಕ ಭೀಮಣ್ಣ ನಾಯ್ಕ್ ರವರ ಹೆಸರಿನಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

ಸಿದ್ದಾಪುರ : ತಾಲೂಕ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೆಗುಂಡಿ ಅವರು ಶಿರಳಗಿ ಶ್ರೀ ನಾರಾಯಣ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶಾಸಕ ಭೀಮಣ್ಣ ನಾಯ್ಕ್ ರವರ ಹೆಸರಿನಲ್ಲಿ ಇತೀಚೆಗೆ ವಿಶೇಷ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿದರು.
ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ರವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ್, ಪ್ರಮುಖರಾದ ವಿ. ಎನ್. ನಾಯ್ಕ್,ಮತ್ತಿತರರು ಉಪಸ್ಥಿತರಿದ್ದರು.