ಸಿದ್ದಾಪುರ :ಬಿಜೆಪಿ ಬೆಂಬಲಿತ ಸದಸ್ಯೆ ಕಾಂಗ್ರೆಸ್ ಸೇರ್ಪಡೆ

ಸಿದ್ದಾಪುರ : ತಾಲೂಕಿನ ಹೆಗ್ಗರಣಿ ಪಂಚಾಯತದ ಬಿಜೆಪಿ ಬೆಂಬಲಿತ ಸದಸ್ಯೆ ಪಾರ್ವತಿ ಸೋಮಶೇಖರ್ ಚೆನ್ನಯ್ಯ ರವರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇರುವುದರಿಂದ ತಮ್ಮ ವಾರ್ಡಿನ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ತೊರೆದು ಶಾಸಕ ಭೀಮಣ್ಣ ನಾಯ್ಕ ರವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ಗಣೇಶ ಚೆನ್ನಯ್ಯ ಸದಸ್ಯ ಅಬ್ದುಲ್ ಬಾರಿ ಸಾಬ ಮುಂತಾದವರು ಉಪಸ್ಥಿತರಿದ್ದರು