ಕಟೀಲು ಶ್ರೀ.ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕರಾದ ಆರ್.ವಿ .ದೇಶಪಾಂಡೆ

ದಾಂಡೇಲಿ : ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಅರ್.ವಿ.ದೇಶಪಾಂಡೆಯವರು ವರಮಹಾಲಕ್ಷ್ಮಿ ಹಬ್ಬದ ನಿಮಿತ್ತವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರವಾದ ಕಟೀಲು ಶ್ರೀ.ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಶ್ರೀ.ಭ್ರಮರಾಂಬೆಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಕ್ಷೇತ್ರದ ಪ್ರದಾನ ಅರ್ಚಕರಾದ ಅನಂತಾಪದ್ಮನಾಭ ಆಸ್ರಣ್ಣ‌ ಅವರು ಆರ್‌ವಿ.ದೇಶಪಾಂಡೆಯವರಿಗೆ ದೇವರ ಪ್ರಸಾದ ಹಾಗೂ ಶ್ರೀದೇವರ ಶೇಷ ವಸ್ತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ರಾಜೇಶ್ ನಾಯಕ ಹಾಗೂ ಪ್ರದ್ಯುಮ್ನ ರಾವ್ ಶಿಬರೂರು ಜೊತೆಗಿದ್ದರು.